ಅಂಬಿಕಾ ಸಿ.ಬಿ.ಎಸ್.ಇ ವಿದ್ಯಾಲಯ-ಶೇ.100 ಫಲಿತಾಂಶ

0

ಪುತ್ತೂರು: ಬಪ್ಪಳಿಗೆ ಅಂಬಿಕಾ ಸಿ.ಬಿ.ಎಸ್.ಇ ವಿದ್ಯಾಲಯದ ಮೊದಲ ಬ್ಯಾಚ್ 10ನೇ ತರಗತಿ ವಿದ್ಯಾರ್ಥಿಗಳು ಶೇ.100 ಫಲಿತಾಂಶದೊಂದಿಗೆ ತೇರ್ಗಡೆ ಹೊಂದಿದ್ದಾರೆ. ಆರು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿದ್ದಾರೆ.

ಸತೀಶ್. ಬಿ ಹಾಗೂ ಜಯಶ್ರೀ ಪೂಜಾರಿಯವರ ಪುತ್ರ ಮನ್ವಿತ್ ಎಸ್. ಶೇ.93, ಕೃಷ್ಣರಾಜ ಹಾಗೂ ಪರಿಣಿತಾ ಎಂ. ದಂಪತಿಯ ಪುತ್ರಿ ಎಂ.ಆತ್ಮಶ್ರೀ-ಶೇ.92, ಕೆ. ನಿರಂಜನ್ ಪೋಳ್ಯ ಮತ್ತು ವೀಣಾ ಕೆ. ಎಸ್ ರವರ ಪುತ್ರ ಇಶಾನ್ ಎಸ್. ಭಟ್-ಶೇ.91.8, ನಂದಕುಮಾರ್ ಮತ್ತು ಎನ್. ಗೌತಮಿರವರ ಪುತ್ರ ಸಂಜಯ್ ಎನ್.-ಶೇ.88, ವಿಶಾಲ್ ಕುಮಾರ್ ಆರ್. ಮಕಾಡಿಯ ಮತ್ತು ಭೂಮಿ ದಂಪತಿಯ ಪುತ್ರ ವೀರ್ ಶೇ.87.6, ಹಾಗೂ ದಾಮೋದರ ಎಂ. ಮತ್ತು ನಿಶಾ ಕೆ.ವಿ ದಂಪತಿಯ ಪುತ್ರಿ ಆರ್ಯ ಎಂ. ಶೇ.86.4 ದೊಂದಿಗೆ ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ತೇರ್ಗಡೆ ಹೊಡಿದ್ದಾರೆ. ಹನ್ನೊಂದು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಮನ್ವಿತ್ ಸಂಸ್ಕೃತದಲ್ಲಿ 100 ಅಂಕಗಳನ್ನು ಗಳಿಸಿರುವುದರೊಂದಿಗೆ ತರಗತಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here