ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ- ಬಲ್ನಾಡು ಘಟಕದ ಮೇಲ್ವಿಚಾರಕ ಹರೀಶ್‌ ಕುಲಾಲ್ ವರ್ಗಾವಣೆ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಬಲ್ನಾಡು ಘಟಕದ ಮೇಲ್ವಿಚಾರಕ ಹರೀಶ್ ಕುಲಾಲ್ ಅವರನ್ನು ಹರೇಡ್ಕ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ .ಈ ನಿಟ್ಟಿನಲ್ಲಿ ಬಲ್ನಾಡು ವಲಯಕ್ಕೆ ಅರಸಿಕೆರೆಯಿಂದ ವರ್ಗಾವಣೆಗೊಂಡು ಆಗಮಿಸಿದ ಮೇಲ್ವಿಚಾರಕ ಪ್ರಶಾಂತ್ ಕುಮಾರ್ ಅವರಿಗೆ ಜವಾಬ್ದಾರಿ ಹಸ್ತಾಂತರ ಮಾಡಲಾಯಿತು. ನಿರ್ಗಮನ ಮೇಲ್ವಿಚಾರಕ ಸಹಕರಿಸಿದ ಎಲ್ಲರಿಗೂ ಕೃತಜ್ಙತೆ ಅರ್ಪಿಸಿದರು. ಆಗಮಿಸಿದ ಮೇಲ್ವಿಚಾರಕ ಎಲ್ಲರ ಸಹಕಾರ ಕೋರಿದರು.

ಈ ಸಂದರ್ಭದಲ್ಲಿ ಬಲ್ನಾಡು ವಲಯ ಅಧ್ಯಕ್ಷ ಸತೀಶ್ ಒಳಗುಡ್ಡೆ, ಮಾಜಿ ವಲಯಾಧ್ಯಕ್ಷ ಅಂಬ್ರೋಸ್ ಡಿ, ಸೋಜ, ವಲಯದ ಒಕ್ಕೂಟ ಅಧ್ಯಕ್ಷ ಮಹಾಲಿಂಗ ನಾಯ್ಕ,ಸೌಮ್ಯ ವೀರಪ್ಪ ನಾಯ್ಕ, ಭಾಸ್ಕರ, ,ನಾಗೇಶ್ ನಾಯ್ಕ,ಪದಾಧಿಕಾರಿಗಳಾದ ಉಮಾವತಿ, ಜಗದೀಶ್, ಮತ್ತು ವಲಯದ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು. ಮಹಾಲಿಂಗ ನಾಯ್ಕ ಮತ್ತು ಪ್ರಮೀಳಾ ಅನಿಸಿಕೆ ವ್ಯಕ್ತಪಡಿಸಿದರು, ಪ್ರಮೀಳಾ ಸ್ವಾಗತಿಸಿ, ಚಿತ್ರ ವಂದಿಸಿ, ಆಶಾಲತಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here