ಸುಂಕದಕಟ್ಟೆ: ಬ್ರೆಝಾ ಕಾರು, ಆಟೋ ರಿಕ್ಷಾ ಡಿಕ್ಕಿ-ಇಬ್ಬರು ಮಹಿಳೆಯರಿಗೆ ಗಾಯ

0

ಕಡಬ: ಆಟೋ ರಿಕ್ಷಾ ಹಾಗೂ ಬ್ರೆಝಾ ಕಾರು ನಡುವೆ ಡಿಕ್ಕಿ ಸಂಭವಿಸಿ ರಿಕ್ಷಾದಲ್ಲಿದ್ದ ಮಹಿಳೆಯರಿಬ್ಬರು ಗಾಯಗೊಂಡಿರುವ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಐತ್ತೂರು ಗ್ರಾಮದ ಸುಂಕದಕಟ್ಟೆ ಜಂಕ್ಷನ್‌ನಲ್ಲಿ ಮೇ 22ರಂದು ಮಧ್ಯಾಹ್ನ ನಡೆದಿದೆ.

ರಿಕ್ಷಾದಲ್ಲಿದ್ದ ಬಿಳಿನೆಲೆಯ ಕಮಲಾ, ಶ್ರೀಕೃಪಾ ಗಾಯಗೊಂಡವರು. ಕುಟ್ರುಪ್ಪಾಡಿ ಗ್ರಾಮದ ಕಳಾರ ನಿವಾಸಿ ಅಶ್ರ- ಎಂಬವರು ತನ್ನ ಆಟೋ ರಿಕ್ಷಾ(ಕೆಎ 21 ಬಿ9027)ದಲ್ಲಿ ಬಿಳಿನೆಲೆಯಿಂದ ಕಡಬಕ್ಕೆ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಬರುತ್ತಿದ್ದ ವೇಳೆ ಕಡಬ ಮರ್ದಾಳ ಕಡೆಯಿಂದ ಬರುತ್ತಿದ್ದ ಬ್ರೀಝಾ ಕಾರು (ಕೆಎ 13 ಝೆಡ್ 8773) ಮತ್ತು ರಿಕ್ಷಾ ನಡುವೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಐತ್ತೂರು ಗ್ರಾಮದ ಸುಂಕದಕಟ್ಟೆ ಜಂಕ್ಷನ್‌ನಲ್ಲಿ ಡಿಕ್ಕಿ ಸಂಭವಿಸಿದೆ. ಪರಿಣಾಮ ಆಟೋ ರಿಕ್ಷಾ ರಸ್ತೆಯ ಎಡಬದಿಗೆ ಮಗುಚಿ ಬಿದ್ದಿದೆ. ಘಟನೆಯಲ್ಲಿ ಆಟೋ ರಿಕ್ಷಾ ಚಾಲಕ ಅಶ್ರಫ್‌ರವರು ಅಪಾಯದಿಂದ ಪಾರಾಗಿದ್ದು ರಿಕ್ಷಾದಲ್ಲಿದ್ದ ಪ್ರಯಾಣಿಕರಾದ ಕಮಲಾ ಮತ್ತು ಶ್ರೀಕೃಪಾ ಅವರು ಗಾಯಗೊಂಡಿದ್ದಾರೆ. ಗಾಯಾಳುಗಳು ಪುತ್ತೂರಿನ ಧನ್ವಂತರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಕುರಿತು ರಿಕ್ಷಾ ಚಾಲಕ ಅಶ್ರಫ್‌ ಅವರು ನೀಡಿರುವ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಕಲಂ: 279. 337 ಐಪಿಸಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here