ನೂತನ ಆಡಳಿತದೊಂದಿಗೆ ಪಾಯಸ್ ಪೆಟ್ರೋಲಿಯಂ ಉದ್ಘಾಟನೆ

0

ಪುತ್ತೂರು : ದರ್ಬೆ ಕಾವೇರಿಕಟ್ಟೆ ಬಳಿ ಕಾರ್ಯಚರಿಸುತ್ತಿರುವ ಪಾಯಸ್ ಪೆಟ್ರೋಲ್ ಪಂಪ್ ಪಂಪ್ , ಇದೀಗ ಸುಳ್ಯ ಅಡ್ಕದ ಉದ್ಯಮಿ ಸಯ್ಯದ್ ಇವರ ನೂತನ ಆಡಳಿತದೊಂದಿಗೆ ಮೇ.28 ರಂದು ಮರು ಉದ್ಘಾಟನೆಗೊಂಡಿತು.


ಉದ್ಘಾಟನೆಯನ್ನು ಪುತ್ತೂರಿನ ಖ್ಯಾತ ವಕೀಲ ಮಹೇಶ್ ಕಜೆ ನೆರವೇರಿಸಿ , ಬಳಿಕ ಮಾತನಾಡಿ , ಯಾವ ರೀತಿ ಎಲ್ಲಾ ಯಂತ್ರಗಳಿಗೂ ಇಂಧನವೂ ಶಕ್ತಿಯನ್ನು ತುಂಬಿ , ಮುಂದೆ ಚಲಿಸೋ ಕಾರ್ಯವನ್ನು ಮಾಡುವ ಹಾಗೆಯೇ ಈ ಉದ್ಯವೂ ಕೂಡ ಗ್ರಾಹಕ ವರ್ಗಕ್ಕೆ ಅತ್ಯುತ್ತಮ ರೀತಿಯ ಸೇವೆ ನೀಡಿ ,ನಿತ್ಯ ನಿರಂತರ ರಕ್ಷೆ ಪಡೆದು ,ಯಶಸ್ಸು ಸಾಧಿಸಿ ,ಮುಂದೆ ಸಾಗಲಿಯೆಂದು ಹೇಳಿ ಹಾರೈಸಿದರು.
ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಕಾಂಗ್ರೇಸ್ ಮುಖಂಡ ಕಾವು ಹೇಮನಾಥ ಶೆಟ್ಟಿ , ಮಾಜಿ ನಗರಸಭಾ ಅಧ್ಯಕ್ಷ ನೆಲ್ಲಿಕಟ್ಟೆ ಜಗನ್ನಾಥ ಶೆಟ್ಟಿ , ವಕೀಲ ಎಂ.ಪಿ.ಅಬೂಬಕ್ಕರ್ ಮುರ , ಪ್ರಸನ್ನ ಶೆಟ್ಟಿ ಸಿಝ್ಲರ್ ,ರೋಶನ್ ರೆಬೆಲ್ಲೋ ಮರೀಲು , ಟಿಂಬರ್ ಮರ್ಚಂಟ್ ಹಾಜಿ ಬಾವಾ , ಬೆಂಗಳೂರು ಸಿ.ಐ.ಡಿ ವಿಭಾಗ ಪೊಲೀಸ್ ಇನ್ಸ್ಪಕ್ಟೆರ್ ಸಿರಾಜುದ್ದೀನ್ ,ಕೆ.ಎಚ್ .ಕಾಸಿಂ ಹಾಗೂ ನಗರಸಭಾ ಸದಸ್ಯ ಯೂಸೂಫ್ ಡ್ರೀಮ್ಸ್ ಸಹಿತ ಹಲವರು ಅತಿಥಿಗಳು ಆಗಮಿಸಿ ಹಾರೈಸಿದರು.
ಮಾಲೀಕ ಸಯ್ಯದ್ ಅಡ್ಕ ಮಾತನಾಡಿ , ಹೊಸದಾಗಿ ಉದ್ಯಮ ಆರಂಭಿಸಿದ್ದೇವೆ , ಇಲ್ಲಿ ಹೆಸರಾಂತ ಹೆಚ್.ಪಿ. ಇದರ ಆಯಿಲ್ ಗಳೂ , ಪೆಟ್ರೋಲ್ ,ಡಿಸೀಲ್ , ಏರ್ ಸರ್ವೀಸ್ ಇವೆಲ್ಲಾ ಬೆಳಗ್ಗೆ 6 ರಿಂದ ರಾತ್ರಿ 12 ತನಕ ಗ್ರಾಹಕ ಸೇವೆಗೆ ಲಭ್ಯವಿದ್ದು ,ಗ್ರಾಹಕರೂ ಸಹಕಾರ ನೀಡುವಂತೆ ಕೋರಿದರು.

LEAVE A REPLY

Please enter your comment!
Please enter your name here