ನೆಕ್ಕಿಲು ಸ್ವಸ್ತಿಕ್ ಗೆಳೆಯರ ಬಳಗದ ವತಿಯಿಂದ ರಸ್ತೆ ದುರಸ್ತಿ, ಸ್ವಚ್ಛತಾ ಶ್ರಮದಾನ

0

ಪುತ್ತೂರು: ಸ್ವಸ್ತಿಕ್ ಗೆಳೆಯರ ಬಳಗ ನೆಕ್ಕಿಲು ಇದರ ವತಿಯಿಂದ ರೆಂಜಲಾಡಿಯಿಂದ ತಿಂಗಳಾಡಿ ವರೆಗೆ ಸ್ವಚ್ಛತಾ ಕಾರ್ಯಕ್ರಮ ಮೇ.28ರಂದು ನಡೆಯಿತು. ರಸ್ತೆ ಬದಿಯಲ್ಲಿರುವ ಕಸ ಕಡ್ಡಿಗಳನ್ನು ಹೆಕ್ಕಿ ಶುಚಿ ಮಾಡಿದ ಗೆಳೆಯರ ಬಳಗದ ಸದಸ್ಯರು ರೆಂಜಲಾಡಿ ಅಂಗನವಾಡಿ ಕೇಂದ್ರಕ್ಕೆ ಹೋಗುವ ರಸ್ತೆಯನ್ನು ಶ್ರಮದಾನದ ಮೂಲಕ ದುರಸ್ತಿಗೊಳಿಸಿದರು. ನೆಕ್ಕಿಲು ಸ್ವಸ್ತಿಕ್ ಗೆಳೆಯರ ಬಳಗದ ಗೌರವಾಧ್ಯಕ್ಷ ಸುಂದರ ಬಾಲ್ಯಾಯ ನೆಕ್ಕಿಲು, ಅಧ್ಯಕ್ಷ ಹರೀಶ್ ವೈ, ಪದ್ಮಯ್ಯ ನಾಯ್ಕ, ತಿಮ್ಮಪ್ಪ ನಾಯ್ಕ, ಅಶೋಕ್ ನಾಯ್ಕ, ಪ್ರಣಾಮ್, ಪ್ರದೀಪ್, ದೀಕ್ಷಿತ್ ಪಂಡಿತ್, ನವೀನ ಬಾಳಾಯ, ನವೀನ್ ಎಲಿಯ, ಪುರುಷೋತ್ತಮ ಆಚಾರ್ಯ, ಅರುಣ, ಮೋಕ್ಷಿತ್ ಬಲ್ಯಾಯ, ಭರತ್, ಜಗನ್ನಾಥ್ ಬಾಳಾಯ, ಹೇಮಚಂದ್ರ, ನಾರಾಯಣ ಬಲ್ಯಾಯ, ಸುಬ್ರಹ್ಮಣ್ಯ ಶರತ್, ಚೇತನ್ ಕಲ್ಪನೆ, ಅನಿಲ್ ಕುಮಾರ್, ದೀಪ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here