ಕೆಎಸ್‌ಆರ್‌ಟಿಸಿ ಸಂಚಾರ ನಿಯಂತ್ರಕ ವಸಂತ ಎ. ನಾಳೆ (ಮೇ 31) ಸೇವಾ ನಿವೃತ್ತಿ

0

ಕಡಬ: ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದ ಕಡಬ ಸಂಚಾರ ನಿಯಂತ್ರಣ ಕೇಂದ್ರದಲ್ಲಿ ಸಂಚಾರ ನಿಯಂತ್ರಕರಾಗಿ ಸೇವೆ ಸಲ್ಲಿಸುತ್ತಿರುವ ಕಡಬ ತಾಲೂಕಿನ ಕುಂತೂರಿನ ಅಗತ್ತಾಡಿ ನಿವಾಸಿ ವಸಂತ ಎ. ಅವರು ಮೇ 31ರಂದು ನಿವೃತ್ತರಾಗಲಿದ್ದಾರೆ.

ವಸಂತ ಎ. ಅವರು 1989ರಲ್ಲಿ ಕೆಎಸ್‌ಆರ್‌ಟಿಸಿಗೆ ನಿರ್ವಾಹಕರಾಗಿ ನೇಮಕಗೊಂಡು ಸೇವೆ ಸಲ್ಲಿಸುತ್ತಿದ್ದರು. ಆ ಬಳಿಕ ಸಂಚಾರ ನಿಯಂತ್ರಕರಾಗಿ ಭಡ್ತಿಗೊಂಡಿದ್ದರು. ಇವರು ಕೆಎಸ್‌ಆರ್‌ಟಿಸಿಯ ಮಂಗಳೂರು ಹಾಗೂ ಪುತ್ತೂರು ವಿಭಾಗದಲ್ಲಿ ಒಟ್ಟು 33 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿದ್ದಾರೆ. ಪ್ರಸ್ತುತ ಕೆಎಸ್‌ಆರ್‌ಟಿಸಿಯ ಕಡಬ ಸಂಚಾರ ನಿಯಂತ್ರಣ ಕೇಂದ್ರದಲ್ಲಿ ಸಂಚಾರ ನಿಯಂತ್ರಕರಾಗಿದ್ದು ಇವರ ಸೇವೆ ಪರಿಗಣಿಸಿ 2018ರಲ್ಲಿ ಸ್ವಾತಂತ್ರ್ಯೋತ್ಸವ ಪ್ರಶಸ್ತಿಯೂ ಬಂದಿತ್ತು. ಇವರ ಪತ್ನಿ ಗಂಗಾರತ್ನ ಗೃಹಿಣಿಯಾಗಿದ್ದು, ಪುತ್ರರಾದ ಬಿ.ಎ.ಪದವೀಧರ ಅಭಿಷೇಕ್ ಹಾಗೂ ಬಿ.ಇ.ಕಂಪ್ಯೂಟರ್ ಸೈನ್ಸ್ ಇಂಜಿನಿಯರ್ ಆಗಿರುವ ಅಭಿಮಾನ್ ಅವರ ಜೊತೆ ಕುಂತೂರಿನ ಅಗತ್ತಾಡಿಯಲ್ಲಿ ವಾಸ್ತವ್ಯವಿದ್ದಾರೆ.

LEAVE A REPLY

Please enter your comment!
Please enter your name here