ಬೊಳುವಾರು ಆಂಜನೇಯ ಮಂತ್ರಾಲಯದಲ್ಲಿ ಯಕ್ಷಗಾನ ತಾಳಮದ್ದಳೆ

0

ಪುತ್ತೂರು: ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ಮೇ.30ರಂದು ಸಂಜೆ ಆಂಜನೇಯ ಯಕ್ಷಗಾನ ಕಲಾ ಸಂಘದ ವತಿಯಿಂದ ‘ಮೇಧಿನಿರ್ಮಾಣ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು.

ಹಿಮ್ಮೇಳದಲ್ಲಿ ಜಯಪ್ರಕಾಶ್ ನಾಕೂರು, ಸತೀಶ್ ಇರ್ದೆ, ಆನಂದ ಸವಣೂರು, ಪದ್ಯಾಣ ಶಂಕರ ನಾರಾಯಣ ಭಟ್, ಪ್ರೊ.ದಂಬೆ ಈಶ್ವರ ಶಾಸ್ತ್ರೀ, ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಆದಿಮಾಯೆ (ದುಗ್ಗಪ್ಪ ಯನ್), ವಿಷ್ಣು (ಕು೦ಬ್ಳೆ ಶ್ರೀಧರ್ ರಾವ್ ಮತ್ತು ಭಾಸ್ಕರ್ ಶೆಟ್ಟಿ ಸಾಲ್ಮರ), ಬ್ರಹ್ಮ (ಭಾಸ್ಕರ್ ಬಾರ್ಯ ಮತ್ತು ಅಚ್ಯುತ ಪಾಂಗಣ್ಣಾಯ ಕೋಡಿಬೈಲು, ಈಶ್ವರ (ಚಂದ್ರಶೇಖರ್ ಭಟ್ ಬಡೆಕ್ಕಿಲ), ಮಧು (ಗುಂಡ್ಯಡ್ಕ ಈಶ್ವರ ಭಟ್), ಕೈಟಭ(ಗುಡ್ಡಪ್ಪ ಬಲ್ಯ) ಸಹಕರಿಸಿದರು. ಟಿ.ರಂಗನಾಥ ರಾವ್ ಸ್ವಾಗತಿಸಿ, ವಂದಿಸಿದರು. ಬನ್ನೂರು ರಾಜಗೋಪಾಲ್ ಭಟ್ ಪ್ರಾಯೋಜಿಸಿದ್ದರು.

LEAVE A REPLY

Please enter your comment!
Please enter your name here