ಅರಿಯಡ್ಕ: ಸಿಡಿಲು ಬಡಿದು ಗಾಯ

0


ಪುತ್ತೂರು: ಕೊಟ್ಟಿಗೆಗೆ ಸಿಡಿಲು ಬಡಿದ ಪರಿಣಾಮ ವ್ಯಕ್ತಿಯೋರ್ವರು ಗಾಯಗೊಂಡ ಘಟನೆ ಅರಿಯಡ್ಕ ಗ್ರಾಮದ ಶೇಖಮಲೆ ಜಾರತ್ತಾರು ಎಂಬಲ್ಲಿಂದ ವರದಿಯಾಗಿದೆ. ಮೇ.31 ರಂದು ಮಧ್ಯರಾತ್ರಿ ಜಾರತ್ತಾರು ಎಂಬಲ್ಲಿ ರಾಮ ಎಂಬವರ ಮನೆಯ ಕೊಟ್ಟಿಗೆಗೆ ಸಿಡಿಲು ಬಡಿದಿದೆ. ರಾಮರವರು ಕೊಟ್ಟಿಗೆಯಲ್ಲಿ ಮಲಗಿದ್ದರು. ಮಲಗಿದ್ದಲ್ಲಿಗೆ ಸಿಡಿಲು ಬಡಿದಿದ್ದು ರಾಮರವರು ಹಾಕಿಕೊಂಡಿದ್ದ ಬಟ್ಟೆ,ಬರೆ ಸಹಿತ ಚಾಪೆಯೂ ಸುಟ್ಟಿದೆ. ರಾಮರವರ ಬೆನ್ನಿಗೆ ಭಾಗಕ್ಕೆ ಸುಟ್ಟ ಗಾಯಗಳಾಗಿದೆ. ರಾಮರವರ ಮನೆಗೆ ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ, ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಭಾಲ್ ಹುಸೇನ್, ಬೂತ್ ಉಸ್ತುವಾರಿ ರಫೀಕ್ ಭೇಟಿ ನೀಡಿದ್ದು, ಅಶೋಕ್ ಪೂಜಾರಿ ಹಾಗೂ ರಫೀಕ್‌ ರಾಮ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

LEAVE A REPLY

Please enter your comment!
Please enter your name here