ಶ್ರೀ ಸರಸ್ವತಿ ಕ್ರೆಡಿಟ್‌ ಸೌಹಾರ್ದ ಸಹಕಾರಿ ಸಂಘ ದ 18 ನೇ ಶಾಖೆ ಮಡಂತ್ಯಾರಿನಲ್ಲಿ ಶುಭಾರಂಭ

0

ಮಡಂತ್ಯಾರು: ಸಹಕಾರಿ ಸಂಘಗಳು ಜನರು ಜೀವನದ ಕಡೆ ನೋಡುವ ದೃಷ್ಟಿಕೋನವನ್ನು ಬದಲಾಯಿಸಿದೆ. ಜನರಿಗೆ ಉತ್ತಮ ಸೇವೆಯನ್ನು ನೀಡಿ ಜನತೆಯ ವಿಶ್ವಾಸವನ್ನು ಗಳಿಸಲಿ. ಶ್ರೀ ಸರಸ್ವತಿ ಸಹಕಾರಿ ಸಂಘ ತಮ್ಮದೇ ಆದಂತಹ ಸಂಸ್ಥೆಯನ್ನು ಸ್ಥಾಪಿಸಿ, ಯುವ ಜನತೆಗೆ ಉದ್ಯೋಗ ಸೃಷ್ಟಿಸುವ ಅವಕಾಶವನ್ನು ಕಲ್ಪಿಸಿದೆ ಎಂದು ವಿಧಾನ ಪರಿಷತ್‌ ಸದಸ್ಯ ಶ್ರೀ ಪ್ರತಾಪ್‌ಸಿಂಹ ನಾಯಕ್‌ ಹೇಳಿದರು.

ಅವರು ಜೂ.2 ರಂದು ಮಡಂತ್ಯಾರಿನಲ್ಲಿ ಶ್ರೀ ಸರಸ್ವತಿ ಕ್ರೆಡಿಟ್‌ ಸೌಹಾರ್ದ ಸಹಕಾರಿ ಸಂಘ (ನಿ.) ಯ 18ನೇ ಶಾಖೆಯ ಉದ್ಘಾಟನೆಯನ್ನು ದೀಪ ಪ್ರಜ್ವಲಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಮಾಲಾಡಿ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಶ್ರೀಮತಿ ಬೇಬಿ ಸುಸ್ಸಾನ, ಮಡಂತ್ಯಾರು ಗ್ರಾಮ ಪಂಚಾಯತ್‌ ಅಧ್ಯಕ್ಷೆ ಶ್ರೀಮತಿ ಶಶಿಪ್ರಭಾ, ನಾವೂರು ಗ್ರಾಮ ಪಂಚಾಯತ್‌ ಅಧ್ಯಕ್ಷ ಗಣೇಶ ಗೌಡ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ನಿರ್ದೇಶಕ ಶ್ರೀಮತಿ ಭಾರತಿ ಜಿ. ಭಟ್‌, ಕರ್ನಾಟಕ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಂಯೋಜಕ ವಿಜಯ್‌, ಎ.ಎನ್‌. ಕಾಂಪ್ಲೆಕ್ಸ್‌ ಮಾಲಕ ಶ್ರೀಮತಿ ವಸಂತಿ ಜೆ.ಶೆಟ್ಟಿ, ಶ್ರೀ ಸರಸ್ವತಿ ಕ್ರೆಡಿಟ್‌ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಶ್ರೀ ಎಸ್. ಆರ್.ಸತೀಶ್ಚಂದ್ರರವರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು ಶಾಖಾ ವ್ಯವಸ್ಥಾಪಕರಾದ ಶ್ರೀ ಪುರಷೋತ್ತಮ ನಾಯಕ್‌ ವಂದಿಸಿದರು. ಸಿಬ್ಬಂದಿ ಶ್ರೀಮತಿ ಸುಷ್ಮಾ ಪ್ರಾರ್ಥಿಸಿದರು. ಪ್ರಧಾನ ಕಚೇರಿಯ ವ್ಯವಸ್ಥಾಪಕರಾದ ಶ್ರೀ ಶಿವಪ್ರಸಾದ್‌ ಟಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸಹಕಾರಿಯ ಉಪಾಧ್ಯಕ್ಷರಾದ ಶ್ರೀ ಉಮೇಶ್‌ ಪ್ರಭು, ನಿರ್ದೇಶಕರುಗಳಾದ ಶ್ರೀ ದೇವಿಪ್ರಸಾದ್‌ ಕೆ, ಶ್ರೀ ಕೆ ಹರೀಶ್‌ ಬೋರ್ಕರ್‌, ಶ್ರೀ ಹೇಮಂತ್‌ ಕುಮಾರ್‌ ಕೆ ಆರ್‌ , ಶ್ರೀ ಪ್ರಕಾಶ್ಚಂದ್ರ ಪಿ, ಶ್ರೀ ರಮೇಶ್ಚಂದ್ರ ಎಂ, ಶ್ರೀ ರಾಜಗೋಪಾಲ ಬಿ, ಶ್ರೀಮತಿ ದೇವಕಿ ಕೆ, ಶ್ರೀಮತಿ ಸರಸ್ವತಿ ಎನ್‌, ಶ್ರೀ ಬಿ ವಸಂತ ಶಂಕರ್‌ , ಶ್ರೀ ರವೀಶ್‌ ಪಿ ಮಾಜಿ ಉಪಾಧ್ಯಕ್ಷರಾದ ಶ್ರೀ ಅನಂತಕೃಷ್ಣ ನಾಯಕ್‌ ಉಪಪ್ರಧಾನ ವ್ಯವಸ್ಥಾಪಕರಾದ ಶ್ರೀಮತಿ ಭವಾನಿ ಪ್ರಭು ಹಾಗೂ ಸಹಕಾರಿಯ ಸಿಬ್ಬಂದಿಗಳು ಹಾಗೂ ಸದಸ್ಯರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here