ದ.ಕ. ಉಡುಪಿ, ಕಾಸರಗೋಡು ಜಿಲ್ಲಾ ಮಟ್ಟದ ಅಹ್ವಾನಿತ ಆಯ್ದ 8 ತಂಡಗಳ ಬಂಟ ಕಲಾವಿದರ ಸಾಂಸ್ಕೃತಿಕ ಸ್ಪರ್ಧೆ, ಬಂಟಸ್ಮೃತಿ ಕಾರ್ಯಕ್ರಮದ ಬಗ್ಗೆ ಪೂರ್ವಾಭಾವಿ ಸಭೆ

0

ಪುತ್ತೂರು: ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಜು.22ರಂದು ಬೆಳಗ್ಗೆ ಗಣಹೋಮ, ಸಂಜೆ 6.30ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಜು.23 ರಂದು ದ.ಕ. ಉಡುಪಿ, ಕಾಸರಗೋಡು ಜಿಲ್ಲಾ ಮಟ್ಟದ ಅಹ್ವಾನಿತ ಆಯ್ದ8 ತಂಡಗಳ ಬಂಟ ಕಲಾವಿದರ ಸಾಂಸ್ಕೃತಿಕ ಸ್ಪರ್ಧೆ, ಬಂಟಸ್ಮೃತಿ ಕಾರ್ಯಕ್ರಮದ ಬಗ್ಗೆ ಪೂರ್ವಾಭಾವಿ ಸಭೆಯು ಜೂ.6ರಂದು ಪುತ್ತೂರು ಬಂಟರ ಭವನದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಶಶಿರಾಜ್ ರೈ ಮುಂಡಾಳಗುತ್ತು ವಹಿಸಿದ್ದರು. ಕಾರ್ಯದರ್ಶಿ ರಂಜಿನಿ ಶೆಟ್ಟಿ, ಕೋಶಾಧಿಕಾರಿ ಅಶೋಕ್ ಶೆಟ್ಟಿ, ಸಂಘದ ಪದಾಧಿಕಾರಿಗಳಾದ ಮನ್ಮಥಶೆಟ್ಟಿ ಕೊಡಿಪ್ಪಾಡಿ, ನವೀನ್ ರೈ ಪಂಜಳ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಹರ್ಷಕುಮಾರ್ ರೈ ಮಾಡಾವು, ಪ್ರಜನ್ ಶೆಟ್ಟಿ ಕಂಬಳತಡ್ಡ, ಪವನ್ ಶೆಟ್ಟಿ ಕಂಬಳತಡ್ಡ, ಸಂದೇಶ್ ರೈ, ಉಮಾಪ್ರಸಾದ್ ರೈ ನಡುಬೈಲು, ರವಿಪ್ರಸಾದ್ ಶೆಟ್ಟಿ ಬನ್ನೂರು ಹಾಗೂ ಬಂಟರ ಭವನದ ಭಾಸ್ಕರ್ ರೈ ರವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here