ಕುಕ್ಕಾಜೆ ಕ್ಷೇತ್ರದ ವತಿಯಿಂದ ಮಕ್ಕಳಿಗೆ ಪುಸ್ತಕ ವಿತರಣೆ

0

ಕ್ಷೇತ್ರದಿಂದ ಕೊಡುವ ಪುಸ್ತಕ ತಾಯಿಯ ಪ್ರಸಾದ: ಶ್ರೀ ಶ್ರೀಕೃಷ್ಣ ಗುರೂಜಿ

ವಿಟ್ಲ: ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದಲ್ಲಿ  ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರ ನೇತೃತ್ವದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಕ್ಷೇತ್ರದ ವತಿಯಿಂದ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.

 ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರು ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿ ಕ್ಷೆಡತ್ರದಿಂದ  ಕೊಡುವ ಪುಸ್ತಕ ತಾಯಿ ಕಾಳಿಕಾಂಬೆಯ ಪ್ರಸಾದ. ತಾಯಿಯ ಅನುಗ್ರಹದಿಂದ ಮಕ್ಕಳ ಭವಿಷ್ಯ ಉಜ್ವಲವಾಗಲಿ ಹಾಗೂ ನಮ್ಮೊಂದಿಗೆ ಪುಸ್ತಕ ವಿತರಣೆಯಲ್ಲಿ ಸಹಕರಿಸಿದ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ ಕಾರಜೆಯವರಿಗೂ ತಾಯಿ ಅನುಗ್ರಹಿಸಲಿ ಎಂದರು.

ಈ ಸಂದರ್ಭದಲ್ಲಿ ಕ್ಷೇತ್ರದ ಮೋಕ್ತೇಸರರಾದ ಎಂ. ಕೆ. ಕುಕ್ಕಾಜೆ, ಪಾಸಿಲ್ ತಾರಿದಳ, ಸ್ವಾತಿ ಕುಕ್ಕಾಜೆ, ಕಾವ್ಯ ಕುಕ್ಕಾಜೆ ಮತ್ತಿತರರು ಉಪಸ್ಥಿತರಿದ್ದರು. ದೇವಿ ಪ್ರಸಾದ್ ಕುಕ್ಕಾಜೆ ಸ್ವಾಗತಿಸಿ. ರವಿ ಎಸ್ಎಂ ಕುಕ್ಕಾಜೆ ವಂದಿಸಿದರು.

LEAVE A REPLY

Please enter your comment!
Please enter your name here