ಸ್ವಾಗತ್ ಸ್ವೀಟ್ಸ್ ಮಾಲಕ ಜಯರಾಮ ಶೆಟ್ಟಿ ನಿಧನ

0

ಪುತ್ತೂರು: ಹಲವಾರು ವರ್ಷಗಳಿಂದ ಅರುಣಾ ಚಿತ್ರಮಂದಿರದ ಬಳಿ ಸ್ವಾಗತ್ ಸ್ವೀಟ್ಸ್ ಅಂಗಡಿಯನ್ನು ಹೊಂದಿದ್ದ ಜಯರಾಮ ಶೆಟ್ಟಿ(71ವ.)ರವರು ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜೂ.9 ರಂದು ನಿಧನ ಹೊಂದಿದ್ದಾರೆ.

ಜನಾನುರಾಗಿಯಾಗಿರುವ ಸಾಮೆತ್ತಡ್ಕ ನಿವಾಸಿ ಜಯರಾಮ ಶೆಟ್ಟಿ ಮೊದಲು ಹೊಟೇಲ್ ಸುಜಾತಾದ ಮುಂಭಾಗದ ಕಟ್ಟಡದಲ್ಲಿ ವ್ಯವಹರಿಸುತ್ತಿದ್ದು, ಕ್ರಮೇಣ ಹತ್ತಿರದಲ್ಲಿನ ಸ್ವಾಗತ್ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು. ಮೃತ ಜಯರಾಮ ಶೆಟ್ಟಿಯವರು ಹಲವಾರು ವರ್ಷಗಳಿಂದ ಕಾಲು ನೋವು ಹಾಗೂ ನರ ವೈಫಲ್ಯತೆಯಿಂದ ಬಳಲುತ್ತಿದ್ದರು. ಮೃತರು ಪತ್ನಿ ಉಮಾ, ಪುತ್ರರಾದ ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ.ಶರಣ್ ಶೆಟ್ಟಿ, ಪುತ್ರಿ ಸೂರತ್ ನಲ್ಲಿ ನೆಲೆಸಿರುವ ಡಾ.ಶ್ರೇಯಾ ಶೆಟ್ಟಿ, ಅಳಿಯ ಹೋಟೆಲ್ ಉದ್ಯಮವನ್ನು ನಡೆಸುತ್ತಿರುವ ಪ್ರತೀನ್ ಶೆಟ್ಟಿ, ಸೊಸೆ ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಕೀರ್ತಿ, ಸಹೋದರ ಬೊಳ್ವಾರು ಸ್ವೀಕಾರ್ ಸ್ವೀಟ್ಸ್ ನ ಪ್ರಭಾಕರ ಶೆಟ್ಟಿ, ಸಹೋದರಿ ಸುಲೋಚನಾ ಶೆಟ್ಟಿ ಸಾಮೆತ್ತಡ್ಕ, ಅಪಾರ ಬಂಧುಮಿತ್ರರನ್ನು, ಹಿತೈಷಿಗಳನ್ನು ಅಗಲಿದ್ದಾರೆ.

ಇಂದು(ಜೂ.9) ಅಪರಾಹ್ನ ಅಂತ್ಯಕ್ರಿಯೆ..
ಅಗಲಿದ ಜಯರಾಮ ಶೆಟ್ಟಿಯವರ ಮೃತದೇಹವನ್ನು ಜೂ‌.9 ರಂದು ಅಪರಾಹ್ನ 1 ಗಂಟೆಗೆ ಸಾಮೆತ್ತಡ್ಕ ನಿವಾಸಕ್ಕೆ ತರಲಾಗುವುದು. ಅಪರಾಹ್ನ 3 ಗಂಟೆಗೆ ಚಿಕ್ಕಪುತ್ತೂರು ಮಡಿವಾಳಕಟ್ಟೆ ರುದ್ರಭೂಮಿಯಲ್ಲಿ ಜರಗಲಿರುವುದು.

LEAVE A REPLY

Please enter your comment!
Please enter your name here