ಕಾರ್ಪಾಡಿ ಶ್ರೀಸುಬ್ರಹ್ಮಣ್ಯ ದೇವಳದಲ್ಲಿ ಪಾದುಕನ್ಯಾಸ

0

ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀಸುಬ್ರಹ್ಮಣ್ಯ ದೇವಳದ ಜೀರ್ಣೋದ್ಧಾರ ಪ್ರಯುಕ್ತ ಜೂ.12ರಂದು ಪಾದುಕನ್ಯಾಸ ಕಾರ್ಯಕ್ರಮ ನೆರವೇರಿತು.

ಕ್ಷೇತ್ರದ ತಂತ್ರಿಗಳಾದ ಕೆಮ್ಮಿಂಜೆ ಕಾರ್ತಿಕ್ ತಂತ್ರಿಗಳು ಪೂಜಾವಿಧಾನ ನಡೆಸಿಕೊಟ್ಟರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ ರಾವ್ ಆರ್ಯಾಪು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಕಾರ್ಯಾಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಗೌಡ, ವ್ಯವಸ್ಥಾಪನಾ ಸಮಿತಿಯ ದೇವಯ್ಯ ಗೌಡ ದೇವಸ್ಯ, ದಾಮೋದರ ರೈ ತೊಟ್ಲ, ವಿಠಲ ರೈ ಮೇರ್ಲ, ಕಿಶೋರ ಗೌಡ ಮರಿಕೆ, ಗಿರೀಶ್ ಕಿನ್ನಿಜಾಲ್, ಮಾಜಿ ಅಧ್ಯಕ್ಷ ಸದಾನಂದ ಶೆಟ್ಟಿ ಕೂರೇಲು, ವೆಂಕಪ್ಪ ಗೌಡ ಕಾಣಿಕೆಮನೆ, ಕುಶಾಲಪ್ಪ ಗೌಡ ದೇವಸ್ಯ, ಶಿಲ್ಪಿ ಪದ್ಮನಾಭ ಪಿಲಿಗೂಡು, ಕಿಶನ್ ಭಟ್ ಮಧುವನ, ಸುಮಾ ಭಟ್, ಚಂದ್ರಕಲಾ ಜಗದೀಶ ಪೂಜಾರಿ, ಗಣೇಶ ಗೌಡ ದೇವಸ್ಯ, ಕೂರೇಲು ತಿಮ್ಮಪ್ಪ ಗೌಡ, ಪೂವಪ್ಪ, ಮಹೇಶ ಕಿರಣ್ ಮಲಾರ್, ಕೃಷ್ಣಪ್ಪ ಗೌಡ ಅಡ್ಕ, ವಿನೋದ್ ಮೇಲ್ಮಜಲು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here