ಮುಕ್ರಂಪಾಡಿ: ರಿಕ್ಷಾ ಪಲ್ಟಿ, ಮಾನವೀಯತೆ ಮೆರೆದ ಶಾಸಕರು

0

ಪುತ್ತೂರು: ಮುಕ್ರಂಪಾಡಿ ಬಳಿ ರಿಕ್ಷಾಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ರಿಕ್ಷಾ ಪಲ್ಟಿಯಾಗಿ, ರಿಕ್ಷಾದಲ್ಲಿದ್ದ ಬಾಲಕ ಸಹಿತ ಕೆಲವು ಮಂದಿ ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಕೆಯ್ಯೂರಿಗೆ ಆಗಮಿಸುತ್ತಿದ್ದ ಶಾಸಕ ಅಶೋಕ್ ಕುಮಾರ್ ರೈಯವರ ಕಾರು ಘಟನೆ ನಡೆದ ಸ್ಥಳಕ್ಕೆ ತಲುಪಿದ್ದು ತಕ್ಷಣವೇ ಶಾಸಕ ಅಶೋಕ್ ಕುಮಾರ್ ರೈಯವರು ಕಾರು ನಿಲ್ಲಿಸುವಂತೆ ಹೇಳಿ ಕಾರಿನಿಂದ ಇಳಿದು ಬಂದು ಗಾಯಾಳುಗಳನ್ನು ಉಪಚರಿಸಿ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದು ಅಲ್ಲದೆ ಪಲ್ಟಿಯಾದ ರಿಕ್ಷಾವನ್ನು ಎದ್ದು ನಿಲ್ಲಿಸಲು ಕೈ ಜೋಡಿಸಿದ್ದು ಜನರ ಪ್ರಶಂಸೆಗೆ ಪಾತ್ರವಾಗಿದೆ ಅಲ್ಲದೆ ತಾನೊಬ್ಬ ಕಾಮನ್‌ಮ್ಯಾನ್ ಶಾಸಕ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

LEAVE A REPLY

Please enter your comment!
Please enter your name here