ಸೂರ್ಯನಾರಾಯಣ ಪದ್ಮಶ್ರೀ ದಂಪತಿಯಿಂದ ಕಕ್ಕೂರು ಹಿ.ಪ್ರಾ.ಶಾಲೆಗೆ ಬಟ್ಟಲು ಲೋಟ ಕೊಡುಗೆ

0

ಪುತ್ತೂರು: ನಿಡ್ಪಳ್ಳಿ ಗ್ರಾಮದ ಮುಂಡೂರು ನಿವಾಸಿ ಸರಸ್ವತಿ ಅಮ್ಮರವರ ಪುತ್ರ ಅಮೇರಿಕಾದಲ್ಲಿ ನೆಲೆಸಿರುವ ಸೂರ್ಯನಾರಾಯಣ ಮತ್ತು ಪದ್ಮಶ್ರೀ ದಂಪತಿಯವರು ಬೆಟ್ಟಂಪಾಡಿ ಗ್ರಾಮದ ಕಕ್ಕೂರು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸುಮಾರು 15೦೦೦ ರೂ. ಮೌಲ್ಯದ ಬಟ್ಟಲು ಮತ್ತು ಲೋಟವನ್ನು ಕೊಡುಗೆಯಾಗಿ ನೀಡಿದರು. ಕಕ್ಕೂರು ಶಾಲೆಯ ಸಹಶಿಕ್ಷಕ ವಿಷ್ಣುಭಟ್‌ರವರ ಸಹೋದರರಾದ ಸೂರ್ಯನಾರಾಯಣ ಮತ್ತು ಪದ್ಮಶ್ರೀ ದಂಪತಿಯನ್ನು ಮುಖ್ಯಶಿಕ್ಷಕರು ಗೌರವಿಸಿದರು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ರವಿಕಲಾ ಎನ್. ಹಾಗೂ ಸದಸ್ಯರಾದ ನೀಲಾವತಿ, ಮೈಮುನ, ಸವಿತಾ, ರಮಣಿ, ಜಲಜಾಕ್ಷಿ ಉಪಸ್ಥಿತರಿದ್ದರು. ಸಹಶಿಕ್ಷಕರು ಸಹಕರಿಸಿದರು.

LEAVE A REPLY

Please enter your comment!
Please enter your name here