ಇಂದು(ಜೂ.16) ನಾಳೆ(ಜೂ. 17) ಗುತ್ತಿಗಾರಿನಲ್ಲಿ ಮಾರುತಿ ಕಾರುಗಳ ಗ್ರಾಮೀಣ ಮಹೋತ್ಸವ: 68ಸಾವಿರ ವರೆಗಿನ ಕೊಡುಗೆ

0

ಪುತ್ತೂರು: ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಅತ್ಯುತ್ತಮ ಗುಣಮಟ್ಟದ, ನಿತ್ಯ ನೂತನ ತಂತ್ರಜ್ಞಾನ ಅಳವಡಿಕೆ ಜೊತೆಗೆ ಕಡಿಮೆ ಬೆಲೆಯೊಡನೆ ಆಕರ್ಷಕ ರೀತಿಯ ಕಾರುಗಳ ತಯಾರಿಕೆಯಲ್ಲಿ ಮುಂಚೂಣಿ ಸಾಲಿನಲ್ಲಿರುವ ಮಾರುತಿ ಸುಝೂಕಿಯು ತನ್ನ ಗ್ರಾಹಕ ವರ್ಗಕ್ಕೆ ಕಾರುಗಳ ಖರೀದಿ ಮೇಲೆ ಭರ್ಜರಿ ಕೊಡುಗೆ ಪ್ರಕಟಿಸಿದೆ. ಮಾರುಕಟ್ಟೆ ಪ್ರಾಬಲ್ಯವನ್ನೂ ಅತೀ ಬಲಿಷ್ಠ ರೀತಿಯಲ್ಲಿ ವಿಸ್ತರಿಸಿ, ಎಲ್ಲಾ ವರ್ಗದ ಜನರನ್ನು ಆಕರ್ಷಿಸಿರುವ ಮಾರುತಿಯು ಇದೀಗ, ಜಿಲ್ಲೆಯ ತನ್ನ ಪ್ರಮುಖ ಡೀಲರ್, ಹಾರಾಡಿ ಬಳಿಯಿರುವ ಭಾರತ್ ಅಟೋಕಾರ್ಸ್ ಜತೆಯಾಗಿ, ಎರಡು ದಿನದ ಬೃಹತ್ ಗ್ರಾಮೀಣ ಮಹೋತ್ಸವವನ್ನು ಜೂ.16ರಂದು ಸುಳ್ಯ ತಾಲೂಕಿನ ಗುತ್ತಿಗಾರು ಭಾರತ್ ಪೆಟ್ರೋಲ್ ಬಂಕ್ ಬಳಿ ಪ್ರಾರಂಭಿಸಿದ್ದು ಜೂ. 17ರಂದು ಕೊನೆಯಾಗಲಿದೆ.

ಯಾವುದೇ ಮಾದರಿಯ ಹಳೇ ಕಾರುಗಳನ್ನು ಬದಲಾಯಿಸೋ ಅವಕಾಶ, ನೂರರಷ್ಟು ಸಾಲದ ವ್ಯವಸ್ಥೆಯೂ ಇರಲಿದ್ದು ಅತ್ಯುತ್ತಮ ಕೊಡುಗೆಗಳು ಸಹ ಸಿಗಲಿವೆ. ಆಯ್ದ ಕಾರುಗಳ ಖರೀದಿಯಲ್ಲಿ ಬರೋಬ್ಬರಿ 68 ಸಾವಿರವರೆಗಿನ ಬೃಹತ್ ಉಳಿತಾಯ ಕೊಡುಗೆಯನ್ನೂ ಸಂಸ್ಥೆ ಘೋಷಣೆ ಮಾಡಿದ್ದು, ದ್ವಿಚಕ್ರ ವಾಹನ ಹೊಂದಿರುವಂಥ ಗ್ರಾಹಕರು ತಮ್ಮ ಆರ್.ಸಿ ದಾಖಲೆ ನೀಡಿ ಎಡಿಷನ್ ಆ-ರ್ ಕೂಡ ಪಡೆಯಬಹುದೆಂದು ಭಾರತ್ ಪ್ರಕಟಣೆ ತಿಳಿಸಿದೆ.

ಬೈಕ್, ಸ್ಕೂಟರ್ .ಇ. ನೀಡಿ, ಖರೀದಿ ಲಾಭ ಪಡೆಯಿರಿ!

ಭಾರತ್ ವತಿಯಿಂದ ಬೈಕ್, ಸ್ಕೂಟರ್ ಸವಾರರಿಗೆ ಒಂದೊಳ್ಳೆಯ ಅವಕಾಶ ತೆರೆದುಕೊಂಡಿದೆ. ತಮ್ಮ ಬಳಿಯಿರುವ ದ್ವಿ ಚಕ್ರ ವಾಹನದ ಇ ತೋರಿಸಿ, ಕಾರು ಮಾಲೀಕರಾಗೋ ಅವಕಾಶವನ್ನು ಭಾರತ್ ನೀಡಿದ್ದು, ಹೆಚ್ಚುವರಿ ಲಾಭವನ್ನು ಕೂಡ ನೀಡಲು ಸಂಸ್ಥೆ ಮುಂದಾಗಿದೆ.
ವಿವರಗಳಿಗಾಗಿ 9483501730, 9886640530

LEAVE A REPLY

Please enter your comment!
Please enter your name here