30 ಸಾವಿರ ಲಂಚ ಪಡೆದ ಗ್ರಾಮಕರಣಿಕ -35 ಸಾವಿರ ಮರಳಿ ಕೊಡಿಸಿದ ಶಾಸಕ‌ ಅಶೋಕ್‌ ಕುಮಾರ್ ರೈ

0

ಪುತ್ತೂರು: ಗ್ರಾಮಕರಣಿಕರೋರ್ವರು ಕಡತ ವಿಲೇವಾರಿಗೆ 30 ಸಾವಿರ ರೂ ಲಂಚ ಪಡೆದುಕೊಂಡಿದ್ದು ಲಂಚ ಪಡೆದ ಮೊತ್ತಕ್ಕೆ 5 ಸಾವಿರ ಸೇರಿಸಿ ಮರಳಿಸುವಂತೆ ಶಾಸಕ ಅಶೋಕ್ ರೈ ಸೂಚಿಸಿದ್ದಾರೆ.


ಪುತ್ತೂರು ಕ್ಷೇತ್ರ ವ್ಯಾಪ್ತಿಯ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ಜಮೀನಿಗೆ ಸಂಬಂಧಪಟ್ಟ ಕಡತವನ್ನು ವಿಲೇವಾರಿ ಮಾಡುವಾಗ ಗ್ರಾಮ ಕರಣಿಕ ಲಂಚ ಪಡೆದಿದ್ದ. ನಾನು ಲಂಚ ಕೊಡುವುದಿಲ್ಲ ಶಾಸಕರಲ್ಲಿ ದೂರು ನೀಡುವುದಾಗಿ ವ್ಯಕ್ತಿ ಹೇಳಿದಾಗ ಗ್ರಾಮ ಕರಣಿಕ ನನಗೆ ಶಾಸಕರ ಪರಿಚಯ ಇದೆ ಎಂದು ಹೇಳಿದ್ದ. ಲಂಚ ಕೊಟ್ಟ ವ್ಯಕ್ತಿ ಶಾಸಕರಲ್ಲಿ ದೂರು ನೀಡಿದ್ದು 24 ಗಂಟೆಯೊಳಗೆ ಪಡೆದ ಮೊತ್ತಕ್ಕೆ 5 ಸಾವಿರ ಸೇರಿಸಿ ಮರಳಿಸಬೇಕು ಎಂದು ಖಡಕ್ ಸೂಚನೆ ನೀಡಿದ್ದಾರೆ.ಡಾ ಯು.ಪಿ ಶಿವಾನಂದ್‌ ಅವರ “ಸುದ್ದಿ” ಜನಾಂದೋಲನ ವೇದಿಕೆಯ ನೇತೃತ್ವದಲ್ಲಿ ಕಳೆದ 2 ವರ್ಷಗಳಿಂದ ಭ್ರಷ್ಟಚಾರ ವಿರೋಧಿ ಅಭಿಯಾನ ನಡೆಸುತ್ತಿದ್ದು ಇದಕ್ಕೆ ಶಕ್ತಿ ತುಂಬುವಂತೆ ನಡೆದುಕೊಂಡ ಶಾಸಕರ ಭ್ರಷ್ಟಚಾರ ವಿರೋಧಿ ನಿಲುವಿನ ಬಗ್ಗೆ ಸಾರ್ವಜನಿಕರಿಂದ ಮುಕ್ತ ಪ್ರಶಂಸೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here