ಪುತ್ತೂರು ವರ್ಣಕುಂಚ ಕಮರ್ಷಿಯಲ್ ಆರ್ಟಿಸ್ಟ್ ಅಸೋಸಿಯೇಶನ್‌ಗೆ ಆಯ್ಕೆ

0

ಅಧ್ಯಕ್ಷ: ಗಿರೀಶ್ ಕೆದ್ಕಾರ್, ಪ್ರ.ಕಾರ್ಯದರ್ಶಿ: ರೀವನ್

ಪುತ್ತೂರು: ವರ್ಣಕುಂಚ ಕಮರ್ಷಿಯಲ್ ಆರ್ಟಿಸ್ಟ್ ಅಸೋಸಿಯೇಶನ್ ಪುತ್ತೂರು ಇದರ ಮಹಾಸಭೆಯು ಅಧ್ಯಕ್ಷ, ಕುಂಬ್ರ ಉದಯ ಆರ್ಟ್ಸ್‌ನ ಚಂದ್ರ ಜಿ.ಕುಂಬ್ರ ಇವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಪುತ್ತೂರು ಕ್ರಿಸ್ತೋಫರ್ ಬಿಲ್ಡಿಂಗ್‌ನಲ್ಲಿ ನಡೆಯಿತು.

ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಗಿರೀಶ್ ಕೆ.ಕೆದ್ಕಾರ್, ಪ್ರಧಾನ ಕಾರ್ಯದರ್ಶಿಯಾಗಿ ರೀವನ್, ಉಪಾಧ್ಯಕ್ಷರಾಗಿ ರಾಜೇಶ್, ಜತೆ ಕಾರ್ಯದರ್ಶಿಯಾಗಿ ಸುರೇಶ್, ಕೋಶಾಧಿಕಾರಿಯಾಗಿ ಗಣೇಶ್, ಸಂಘಟನಾ ಕಾರ್ಯದರ್ಶಿಯಾಗಿ ಮಹೇಶ್‌ರವರುಗಳನ್ನು ಆಯ್ಕೆ ಮಾಡಲಾಯಿತು. ಲಕ್ಕಿ ಆರ್ಟಿಸ್ಟ್ ಆಗಿ ರೀವನ್ ಆಯ್ಕೆಯಾದರು. ಲಕ್ಕಿ ಡ್ರಾದಲ್ಲಿ ಪ್ರಥಮ ಶೇಖರ್ ಹಾಗೂ ದ್ವಿತೀಯ ನಾಗಪ್ಪ ಆಯ್ಕೆಯಾದರು. ತಾರಾನಾಥರವರು ಚಿಟ್‌ಫಂಡ್ ವಿಜೇತರಾದರು.


ಈ ಸಂದರ್ಭದಲ್ಲಿ ಪ್ರಸಾದ್, ತಾರಾನಾಥ, ಶೇಖರ್, ಹರೀಶ್, ನಾಗಪ್ಪ, ಇಮ್ತಿಯಾಜ್, ವಿಘ್ನೇಶ್, ರಾಜೇಶ್ ಉಪಸ್ಥಿತರಿದ್ದರು. ರೀವನ್ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here