ಕುಂಬ್ರ: ಗ್ರಾಮಾಭಿವೃದ್ಧಿ ಯೋಜನೆ ಕುಂಬ್ರ ಒಕ್ಕೂಟದ ತ್ರೈಮಾಸಿಕ ಸಭೆ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ(ಬಿ ಸಿ ಟ್ರಸ್ಟ್) ಪುತ್ತೂರು ಇದರ ಕುಂಬ್ರ ಒಕ್ಕೂಟದ ತ್ರೈಮಾಸಿಕ ಸಭೆಯು ಕರ್ನಾಟಕ ಪಬ್ಲಿಕ್ ಸ್ಕೂಲ್ ಕುಂಬ್ರದಲ್ಲಿ ಒಕ್ಕೂಟದ ಅಧ್ಯಕ್ಷ ಎಸ್ ಮಾಧವ ರೈ ಕುಂಬ್ರ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ವಲಯ ಮೇಲ್ವಿಚಾರಕಿ ಮೋಹಿನಿ ಎಸ್ ಗೌಡ ರವರು ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಸೇವಾ ಪ್ರತಿನಿಧಿ ಶಶಿಕಲ ರೈಯವರು ವಾರದ ಸಭೆ ಬಗ್ಗೆ ತಿಳಿಸಿದರು. ಜನಜಾಗೃತಿ ಗ್ರಾಮ ಸಮಿತಿ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಒಕ್ಕೂಟದ ಉಪಾಧ್ಯಕ್ಷ ರಾಮಕೃಷ್ಣ ನಾಯ್ಕ ಮುಡಾಲ, ಜೊತೆ ಕಾರ್ಯದರ್ಶಿ ಶಿಲ್ಪ ಉಪಸ್ಥಿತರಿದ್ದರು. ದಾಖಲಾತಿ ಸಮಿತಿ ಸದಸ್ಯರಾದ ತುಳಸಿ ಮಗಿರೆ, ಬದ್ರುನ್ನಿಸ ಪರ್ಪುಂಜ, ರೇವತಿ ರೈ ಕುಂಬ್ರ, ರೇಖಾ ಪರ್ಪುಂಜ, ಸುಗುಣ ಉರ್ವರವರು ದಾಖಲಾತಿ ಪರಿಶೀಲಿಸಿದರು. ಹೊಸದಾಗಿ ಕುಂಬ್ರ ಕಾರ್ಯಕ್ಷೇತ್ರಕ್ಕೆ ವಲಯ ಮೇಲ್ವಿಚಾರಕರಾಗಿ ಬಂದಿರುವ ಮೋಹಿನಿ ಎಸ್ ಗೌಡರವರನ್ನು ಹೂವು ಗುಚ್ಛ ಕೊಟ್ಟು ಸ್ವಾಗತಿಸಲಾಯಿತು. ವಿನೋದ ಮಗಿರೆ ಸ್ವಾಗತಿಸಿ, ಜಯಂತಿ ಕುಂಬ್ರ ವಂದಿಸಿದರು. ಒಕ್ಕೂಟದ ಕಾರ್ಯದರ್ಶಿ ರಾಜೀವಿ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here