ರಿಯಾದ್‌ ನಲ್ಲಿ ಮೃತ ಪಟ್ಟ ಎಲ್ ಟಿ ಮಹಮ್ಮದ್‌ ಮೃತದೇಹ ನಾಳೆ ಹುಟ್ಟೂರು ಪುತ್ತೂರಿಗೆ

0

ಪುತ್ತೂರು: ಜೂ.15 ರಂದು ಸೌದಿ ಅರೇಬಿಯಾದ ರಿಯಾದ್ ನಲ್ಲಿ ಹೃದಯಾಘಾತದಿಂದ ಪುತ್ತೂರು ನಗರ ವ್ಯಾಪ್ತಿಯ ಚಿಕ್ಕಪುತ್ತೂರಿನ ಎಲ್.ಟಿ.ಮುಹಮ್ಮದ್ ಯಾನೆ ಬಾವು ಅವರ ಮೃತ ದೇಹ ಜೂ.21 ರಂದು ಬೆಳಿಗ್ಗೆ ಮಂಗಳೂರಿಗೆ ತಲುಪಲಿದ್ದು ಬಳಿಕ ಪುತ್ತೂರಿಗೆ ತರಲಾಗುವುದು.

ಮೃತರ ಹಿರಿಯ ಸಹೋದರ ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಅಧ್ಯಕ್ಷರಾದ ಎಲ್.ಟಿ. ಅಬ್ದುಲ್ ರಝಾಕ್ ಹಾಜಿಯವರ ಮನೆಯಲ್ಲಿ ಅಂತಿಮ ದರ್ಶನ ಪಡೆದ ಬಳಿಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪುತ್ತೂರಿನ ಸಾಲ್ಮರ ಜುಮಾ ಮಸೀದಿಯ ದಫನ ಭೂಮಿಯಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here