ಸ್ಕೂಟರ್‌ನಿಂದ ಸಾವಿರಾರು ರೂ ನಗದು ಕಳವು ಮಾಡಿದ ಆರೋಪಿಗೆ ನ್ಯಾಯಾಂಗ ಬಂಧನ

0

ಪುತ್ತೂರು: ರಾತ್ರಿ ಹೊತ್ತು ಕಬಕದಲ್ಲಿ ಪಾರ್ಕ್ ಮಾಡಲಾದ ಸ್ಕೂಟರ್‌ವೊಂದರ ಸೀಟ್‌ನ ತಳಭಾಗದಲ್ಲಿದ್ದ ಸಾವಿರಾರು ರೂಪಾಯಿ ನಗದು ಕಳವು ಮಾಡಿದ ಘಟನೆಗೆ ಸಂಬಂಧಿಸಿ ಬಂಧಿತನಾದ ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.


ಕಬಕ ನಿವಾಸಿ ನಶ್ವಾನ್ ಎಂಬವರು ಬಂದಿತ ಆರೋಪಿ. ವಿಟ್ಲ ನಿವಾಸಿ ಕೋಳ್ನಾಡು ಗ್ರಾಮದ ಪರ್ತಿಪಾಡಿ ನಿವಾಸಿ ತಿಲಕ್ ಎಂಬವರು ಕಬಕದಲ್ಲಿ ಜೂ.19ರಂದು ತನ್ನ ಸ್ಕೂಟರ್‌ನ್ನು ಪಾರ್ಕ್ ಮಾಡಿ ಸ್ಕೂಟರ್‌ನ ಸೀಟ್‌ನ ತಳಭಾಗದಲ್ಲಿ ರೂ. 22ಸಾವಿರ ನಗದು ಇರಿಸಿದ್ದರು. ಆದರೆ ಅವರು ಪುನಃ ಬಂದು ನೋಡಿದಾಗ ನಗದು ಕಳವಾಗಿತ್ತು. ಈ ಕುರಿತು ತಿಲಕ್ ಅವರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ಕೈಗೆತ್ತಿಕೊಂಡು ಆರೋಪಿ ನಶ್ವಾನ್ ಅವರನ್ನು ಜೂ. 20ರಂದು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಅವರು ಕಳವು ಮಾಡಿರುವ ಕುರಿತು ಬಾಯಿ ಬಿಟ್ಟಿದ್ದಾರೆ. ಜೂ. 21ರಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

LEAVE A REPLY

Please enter your comment!
Please enter your name here