ಎಡನೀರು ಶ್ರೀಗಳ ಚಾತುರ್ಮಾಸ ವ್ರತಾಚರಣೆ ಹಿನ್ನೆಲೆ-ಜೂ. 25ಕ್ಕೆ ಕಲ್ಲಾರೆ ಶ್ರೀ ಗುರುರಾಘವೇಂದ್ರ ಮಠದಲ್ಲಿ ಅಭಿಮಾನಿಗಳ ಸಭೆ

0

ಪುತ್ತೂರು: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ತೃತೀಯ ಚಾತುರ್ಮಾಸ ವ್ರತಾಚರಣೆಯು ಜು.3ರಿಂದ ಶ್ರೀ ಎಡನೀರು ಮಠದಲ್ಲೇ ನಡೆಯಲಿದ್ದು, ಅದರ ಪೂರ್ವ ಭಾವಿಯಾಗಿ ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಜೂ.25ರಂದು ಬೆಳಿಗ್ಗೆ ಗಂಟೆ 10ಕ್ಕೆ ಅಭಿಮಾನಿಗಳ ಸಭೆ ನಡೆಯಲಿದೆ.


ಎಡನೀರು ಶ್ರೀಗಳ ಚಾತುರ್ಮಾಸ ವ್ರತಾಚರಣೆ ಜು. 3ರಿಂದ ಸೆ.29ರ ತನಕ ಎಡನೀರು ಮಠದಲ್ಲೇ ನಡೆಯಲಿದೆ. ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಬೆಳಿಗ್ಗೆ ಸಭೆ ನಡೆದ ಬಳಿಕ ಮಧ್ಯಾಹ್ನ ಶ್ರೀಗಳ ಪಟ್ಟದ ದೇವರಿಗೆ ಮಹಾಪೂಜೆ, ಪ್ರಸಾದ, ಬಿಕ್ಷಾವಂದನೆ ಜರುಗಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here