ನಿವೃತ್ತ ನ್ಯಾಯಾಂಗ ಶಿರಸ್ತೇದಾರ್ ವೆಂಕಪ್ಪ ಪೂಜಾರಿ ನಿಧನ

0

ಪುತ್ತೂರು: ಕಡಬ ತಾಲೂಕಿನ ಆಲಂಕಾರು ಗ್ರಾಮದ ಎಣ್ಣೆತೋಡಿ ಮನೆತನದ ವೆಂಕಪ್ಪ ಪೂಜಾರಿ(72ವ.)ರವರು ಜೂ.16ರಂದು ನಿಧನರಾದರು.
ಮಂಗಳೂರಿನಲ್ಲಿ ವಾಸ್ತವ್ಯವಿದ್ದ ವೆಂಕಪ್ಪ ಪೂಜಾರಿಯವರು ಮಂಗಳೂರು, ಬೆಳ್ತಂಗಡಿ, ಉಡುಪಿ ನ್ಯಾಯಾಲಯದಲ್ಲಿ ಶಿರಸ್ತೇದಾರರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು. ನಿವೃತ್ತಿ ಬಳಿಕ ಸುಮಾರು 5 ವರ್ಷ ಮಂಗಳೂರು ನ್ಯಾಯಾಲಯದಲ್ಲಿ ವಕೀಲರಾಗಿಯೂ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here