ಮರ್ದಾಳ:ಚಿನ್ನದಂಗಡಿ ಶುಭಾರಂಭದ ಖುಷಿಯಲ್ಲಿದ್ದ ಯುವಕನ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ

0

ಕಡಬ: ಕಡಬ, ಚಿನ್ನದ ಅಂಗಡಿ ಉದ್ಘಾಟನೆಯ ಬ್ಯುಸಿಯಲ್ಲಿದ್ದ ಯುವಕನೋರ್ವ ಅಪಘಾತದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದೆ.
ಮೃತ ಯುವಕನನ್ನು ಕಡಬ ನಿವಾಸಿ ನಾಗಪ್ರಸಾದ್ ಎಂದು ಗುರುತಿಸಲಾಗಿದೆ. ಮರ್ದಾಳ ಮಸೀದಿ ಬಿಲ್ಡಿಂಗ್ ನಲ್ಲಿ ಜೂನ್ 22ರಂದು ಐಶ್ವರ್ಯ ಗೋಲ್ಡ್ ಹೆಸರಿನ ಚಿನ್ನದಂಗಡಿ ಶುಭಾರಂಭಗೊಳ್ಳಬೇಕಾಗಿತ್ತು, ಈ ಹಿನ್ನೆಲೆಯಲ್ಲಿ ಶುಭಾರಂಭಕ್ಕೆ ಬೇಕಾದ ತಯಾರಿಯಲ್ಲಿ ನಾಗಪ್ರಸಾದ್‌ ನಿರತರಾಗಿದ್ದರು ಆದರೆ ಅಂಗಡಿ ಶುಭಾರಂಭದ ದಿನವಾದ ಇಂದು ಬೆಳಿಗ್ಗೆ ನಾಗಪ್ರಸಾದ್‌ ಮೃತದೇಹವು ಸಕಲೇಶಪುರ ಠಾಣಾ ವ್ಯಾಪ್ತಿಯ ಗುಂಡ್ಯ ಸಮೀಪ ಅಪಘಾತದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದೆ. ಘಟನೆಯ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ, ತನಿಖೆಯ ನಂತರವಷ್ಟೇ ನಿಖರ ಕಾರಣ ತಿಳಿದುಬರಬೇಕಿದೆ.

LEAVE A REPLY

Please enter your comment!
Please enter your name here