ಹೊಟ್ಟೆ ಉಬ್ಬರ, ಉಸಿರಾಟದ ಅಡಚಣೆ – ನಾವೂರು ನಿವಾಸಿ ಸಾವು-ದೂರು

0

ಪುತ್ತೂರು:ಹೊಟ್ಟೆ ಉಬ್ಬರಿಸುವುದು, ಉಸಿರಾಟದಲ್ಲಿ ಅಡಚಣೆ ಉಂಟಾಗಿ ವ್ಯಕ್ತಿಯೋರ್ವರು ಸಾವಿಗೀಡಾದ ಘಟನೆ ಕಾಣಿಯೂರು ನಾವೂರುನಿಂದ ವರದಿಯಾಗಿದೆ.
ನಾವೂರು ನಿವಾಸಿ ರಾಮಚಂದ್ರ ಮೃತಪಟ್ಟವರು.ಈ ಕುರಿತು ಅವರ ಪುತ್ರಿ ಚಿತ್ರಾರವರು ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದಾರೆ.‘ತಾನು ನಾವೂರಿನಲ್ಲಿ ತಂದೆ ರಾಮಚಂದ್ರ ಗೌಡ ಮತ್ತು ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದೇನೆ. ತಾಯಿ ಭವಾನಿ ಮತ್ತು ಅಣ್ಣ ಲಿಂಗಪ್ಪ ಜಮೀನಿನ ಪಾಲು ಹಾಗೂ ಕುಟುಂಬದ ವಿಚಾರದಲ್ಲಿ ಅಪ್ಪ ಮತ್ತು ನನ್ನೊಂದಿಗೆ ತಕರಾರು ಮಾಡಿ ಪ್ರತ್ಯೇಕವಾಗಿ ವಾಸ್ತವ್ಯವಿದ್ದಾರೆ.ಜೂ.21ರಂದು ರಾತ್ರಿ ಊಟ ಮಾಡಿ ಮಲಗಿದ್ದ ತಂದೆ ರಾಮಚಂದ್ರ ಗೌಡರಿಗೆ ಜೂ.22ರಂದು 2 ಗಂಟೆಗೆ ಹೊಟ್ಟೆ ಉಬ್ಬರಿಸುವುದು, ಉಸಿರಾಟದಲ್ಲಿ ಅಡಚಣೆ ಉಂಟಾಗುತ್ತಿರುವುದಾಗಿ ತಿಳಿಸಿದ್ದರು. ನಾನು ಅವರನ್ನು ಉಪಚರಿಸಿ ಕಾರಿನಲ್ಲಿ ಕಾಣಿಯೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗೆ ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದ್ದರು.ಅದರಂತೆ ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ತಂದೆ ರಾಮಚಂದ್ರ ಗೌಡರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದರು’ ಎಂದು ಚಿತ್ರಾರವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.ಪೊಲೀಸರು ಕಲಂ 174ಸಿ.ಆರ್.ಪಿ.ಸಿ ಯುಡಿಆರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here