![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಬಡಗನ್ನೂರು ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ರಾಜರಾಜೇಶ್ವರಿ ಭಜನಾ ತಂಡ ಉದ್ಘಾಟನೆ ಇತ್ತೀಚಿಗೆ ನಡೆಯಿತು. ಉದ್ಯಮಿ ಸತೀಶ್ ರೈ ಕಟ್ಟಾವು ಶ್ರೀ ರಾಜರಾಜೇಶ್ವರಿ ನಾಮಾಂಕಿತ ಭಜನಾ ತಂಡವನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಭಜನಾ ತರಬೇತಿದಾರ ಕಾರ್ತಿಕ್ ಭಜನೆಯ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು ವೇದಿಕೆಯಲ್ಲಿ ಸರ್ವಶಕ್ತಿ ಭಜನಾ ತಂಡದ ಅಧ್ಯಕ್ಷೆ ಯಶೋಧ ಬಡಕ್ಕಾಯೂರು ಉಪಸ್ಥಿತರಿದ್ದರು. ಭವ್ಯ ಸ್ವಾಗತಿಸಿದರು ಸುಲೋಚನ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.