ಸವಣೂರು: ಕುಮಾರದಾರ ಆಟೋ ಚಾಲಕ ಮಾಲಕರ ಸೇವಾ ಸಂಘ ರಚನೆ

0

ಗೌರಾವಧ್ಯಕ್ಷ :ಹೊನ್ನಪ್ಪ ಪೂಜಾರಿ, ಅಧ್ಯಕ್ಷ :ದಿಲೀಪ್ ಹೆಗ್ಡೆ ಕಾರ್ಯದರ್ಶಿ: ಸ್ವಸ್ಟಿಕ್ ಪಟ್ಟೆ

ಪುತ್ತೂರು : ಕುಮಾರದಾರ ಆಟೋ ಚಾಲಕ ಮಾಲಕರ ಸೇವಾ ಸಂಘ ಸವಣೂರು ಇದರ ಮಹಾಸಭೆಯು ಸವಣೂರು ಸಭಾಭವನದಲ್ಲಿ ಸಮಿತಿಯ ಅಧ್ಯಕ್ಷ ಹಸೈನಾರ್ ಕಾಯರ್ಗ ಇವರ ಅಧ್ಯಕ್ಷತೆಯಲ್ಲಿ,ಸಮೀತಿಯ ಗೌರವಸಲಹೆಗಾರ .ಡಾ. ಸುಬ್ರಮಣ್ಯ ಭಟ್ ರವರ ಸಲಹೆ ಸೂಚನೆಯೊಂದಿಗೆ ನಡೆಸಲಾಯಿತು.

ಮುಖ್ಯ ಅತಿಥಿಯಾಗಿ ಕುಮಾರದರಾ ಆಟೋ ಚಾಲಕ ಮಾಲಕರ ಸೇವಾ ಸಂಘ ಸವಣೂರು ಇದರ ವೈದ್ಯಕೀಯ ಸಲಹೆಗಾರ ಡಾ .ಶ್ಯಾಮ್ ಸುಂದರ್ ಮಾತನಾಡಿ ರಿಕ್ಷಾ ಚಾಲಕ ಮಾಲಕರಿಗೆ ಶುಭಹಾರೈಸಿದರು. ಕುಮಾರದಾರ ಆಟೋ ಚಾಲಕ ಮಾಲಕರ ಸೇವಾ ಸಂಘ ಸವಣೂರು ಇದರ ಕಾನೂನು ಸಲಹೆಗಾರ ನ್ಯಾಯವಾದಿ ಪ್ರವೀಣ್ ದೋಳ ಮಾತನಾಡಿ ನಮ್ಮ ಸವಣೂರಿನ ಆಟೋ ಚಾಲಕರು ಇನ್ನೊಂದು ಊರಿಗೆ ಮಾದರಿ ಆಗಬೇಕು ಎಂದು ಹೇಳಿದರು.

22 ಸದಸ್ಯರೊಳಗೊಂಡ ನೂತನ ಸಮಿತಿಯನ್ನು ರಚಿಸಲಾಯಿತು ಗೌರವಧ್ಯಕ್ಷರಾಗಿ ಹೊನ್ನಪ್ಪ ಪೂಜಾರಿ ದೇವಸ್ಯ ಅಧ್ಯಕ್ಷರಾಗಿ ದಿಲೀಪ್ ಹೆಗ್ಡೆ ಉಪಾಧ್ಯಕ್ಷರಾಗಿ ಮಹಮದ್ ಬಾಬಾ ಕಾರ್ಯದರ್ಶಿಯಾಗಿ ಸ್ವಸ್ತಿಕ್ ಪಟ್ಟೆ ಜೊತೆ ಕಾರ್ಯದರ್ಶಿಯಾಗಿ ಅಶ್ರಫ್ ಜನತಾ ಕೋಶಾಧಿಕಾರಿಯಾಗಿ ಅಶೋಕ್ ಸಾರಕರೆ ಇವರನ್ನು ಆಯ್ಕೆ ಮಾಡಲಾಯಿತು. ಮಾಜಿ ಕಾರ್ಯದರ್ಶಿ ರಾಧಕೃಷ್ಣ ವರದಿ ಮಂಡಿಸಿದರು ಸಂಘದ ನೂತನ ಗೌರವಧ್ಯಕ್ಷ ಹೊನ್ನಪ್ಪ ಪೂಜಾರಿ ಮಾತನಾಡಿ, ಶುಭಹಾರೈಸಿದರು. ಅಶ್ರಫ್ ಜನತಾ ಪ್ರಸ್ತಾವಿಕ ಮಾತನಾಡಿ, ಸ್ವಾಗತಿಸಿ, ಸ್ವಸ್ತಿಕ್ ವಂದಿಸಿದರು. ಹಸೈನಾರ್ ಕಾಯರ್ಗ ರಾಘವ, ರಾಧಾಕೃಷ್ಣ ಸಹಕರಿಸಿದರು.

LEAVE A REPLY

Please enter your comment!
Please enter your name here