ಬಂಡಾಜೆ ಅಂಗನವಾಡಿ ಕೇಂದ್ರದಲ್ಲಿ ಬಾಲವಿಕಾಸ ಸಮಿತಿ ಸಭೆ- ಸಮಿತಿ ರಚನೆ

0

ಅಧ್ಯಕ್ಷರಾಗಿ ಸವಿತಾ ನಾವೂರು, ಕಾರ್ಯದರ್ಶಿ ಸುಮಿತ್ರಾ ರವಿ

ಕಾಣಿಯೂರು: ಕಾಣಿಯೂರು ಗ್ರಾಮದ ಬಂಡಾಜೆ ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿ ಸಭೆಯು ಬಾಲವಿಕಾಸ ಸಮಿತಿ ಅಧ್ಯಕ್ಷೆ ಪದ್ಮಲತಾ ಮುರಳೀಧರ ಅವರ ಅಧ್ಯಕ್ಷತೆಯಲ್ಲಿ ಜೂ.28ರಂದು ನಡೆಯಿತು. ಈ ಸಂದರ್ಭದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಸವಿತಾ ತಾರಾನಾಥ ನಾವೂರು, ಕಾರ್ಯದರ್ಶಿಯಾಗಿ ಅಂಗನವಾಡಿ ಕಾರ್ಯಕರ್ತೆ ಸುಮಿತ್ರಾ ರವಿ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ನಿವೃತ್ತ ಶಿಕ್ಷಕ ಜಯರಾಮ ಗೌಡ ಬಂಡಾಜೆ, ಗ್ರಾ.ಪಂ.ಸದಸ್ಯ ರಾಮಣ್ಣ ಗೌಡ ಮುಗರಂಜ, ಉಮೇಶ್ ಬಂಡಾಜೆ, ಚಿತ್ರಾ ನಾವೂರು, ಬೇಬಿ ಬಂಡಾಜೆ, ಆಶಾಕಾರ್ಯಕರ್ತೆ ಕುಸುಮಾ, ಯಶೋಧ ನಾವೂರು, ರಮೇಶ್ ಬೈಲಡ್ಡೆ, ದೀಪ್ತಿ ಬಂಡಾಜೆ ಆಯ್ಕೆಯಾದರು. ಈ ಸಂದರ್ಭದಲ್ಲಿ ಸಮಿತಿ ಸದಸ್ಯರು, ಸ್ತ್ರೀಶಕ್ತಿ ಸಂಘದ ಸದಸ್ಯರು, ಪೋಷಕರು, ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಸುಮಿತ್ರಾ ರವಿ ಸ್ವಾಗತಿಸಿ, ಉಮೇಶ್ ಬಂಡಾಜೆ ವಂದಿಸಿದರು. ಸಹಾಯಕಿ ಪದ್ಮಲತಾ ಸಹಕರಿಸಿದರು.

LEAVE A REPLY

Please enter your comment!
Please enter your name here