ಫಿಲೋಮಿನಾ ಗಣೇಶೋತ್ಸವ 41ರ ವರ್ಷದ ಸಂಭ್ರಮ – ಹಿರಿಯ ವಿದ್ಯಾರ್ಥಿ ಗಣೇಶೋತ್ಸವ ಟ್ರಸ್ಟ್ ಸಭೆ

0

ಪುತ್ತೂರು: ಸಂತ ಫಿಲೋಮಿನಾ ಕಾಲೇಜು ಹಿರಿಯ ವಿದ್ಯಾರ್ಥಿ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಹಾಗೂ ಸಂತ ಫಿಲೋಮಿನಾ ವಿದ್ಯಾರ್ಥಿ ಶ್ರೀ ಗಣೇಶೋತ್ಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ 41ನೇ ವರ್ಷದ ಶ್ರೀ ಗಣೇಶೋತ್ಸವ ಸಮಿತಿಯ ಪೂರ್ವಭಾವಿ ಸಭೆಯು ಫಿಲೋಮಿನಾ ಗಣೇಶೋತ್ಸವ ಟ್ರಸ್ಟ್‌ನ ಅಧ್ಯಕ್ಷರಾದ ಪ್ರಕಾಶ್ ಮುಕ್ರಂಪಾಡಿರವರ ಅಧ್ಯಕ್ಷತೆಯಲ್ಲಿ ದರ್ಬೆ ವಿನಾಯಕ ನಗರದಲ್ಲಿ ಇತ್ತೀಚೆಗೆ ನಡೆಯಿತು.
ಸೆಪ್ಟೆಂಬರ್ 19 ಹಾಗೂ 20ರಂದು ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಫಿಲೋಮಿನಾ ವಿದ್ಯಾಸಂಸ್ಥೆಯ ರ‍್ಯಾಂಕ್ ವಿಜೇತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಅಭಿನಂದನಾ ಕಾರ್ಯಕ್ರಮ ಜರಗಲಿದೆ. ಅಲ್ಲದೆ ಸೆ.20ರಂದು ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಆಗಸ್ಟ್ ತಿಂಗಳಿನಲ್ಲಿ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಹಾಗೂ ಹಿರಿಯ ವಿದ್ಯಾರ್ಥಿ ಮಿತ್ರರಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಹಿರಿಯ ವಿದ್ಯಾರ್ಥಿಗಳಾದ ದುರ್ಗಾಪ್ರಸಾದ್, ನಾಗೇಶ್ ಪೈ, ಹರಿಣಿ ಪುತ್ತೂರಾಯ, ವೆಂಕಟಕೃಷ್ಣ ಎಂ.ಎನ್, ಶಿವಪ್ರಸಾದ್, ಸುಖೇಶ್, ಸುಕುಮಾರ, ನಿತೀಶ್ ನಂದನ್, ಆಶ್ಲೇಶ್, ಶರದ್, ಕಿಶನ್, ಪ್ರಜ್ವಲ್ ಹಾಗೂ ವಿದ್ಯಾರ್ಥಿಗಳಾದ ವಿಕ್ರಂ ಆಳ್ವ, ಹೃದಯ್ ಪರ್ಲಡ್ಕ, ಗುರುಪ್ರಸಾದ, ಧನುಷ್, ಶಮಿತ್, ಬಫಿನ, ಪ್ರದ್ಯುಮ್ನ, ಸುಹಾನ್, ಫಣಿಮುಖ, ಚಂದನ್, ವರುಣ್, ಮನೀಶ್, ಸ್ವರೂಪ್, ಆದಿತ್ಯ, ದರ್ಶನ್, ಸೃಜನ್, ಅನುಶಿ ಮತ್ತಿತರರು ಉಪಸ್ಥಿತರಿದ್ದರು.

ಜು.6:ಫಿಲೋ ಗಣಪನ ವಿಗ್ರಹ ಮುಹೂರ್ತ
ಫಿಲೋ ಗಣಪನ ವಿಗ್ರಹ ಮುಹೂರ್ತ ಕಾರ್ಯಕ್ರಮವು ಜು.6 ರಂದು ಪರ್ಲಡ್ಕದಲ್ಲಿ ನಡೆಯಲಿದೆ. ವಿಗ್ರಹ ರಚನೆಕಾರ ತಾರಾನಾಥ ಆಚಾರ್ಯರವರ ನೇತೃತ್ವದಲ್ಲಿ ಮುಹೂರ್ತ ಕಾರ್ಯಕ್ರಮ ಜರಗಲಿದೆ. ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿ ಮಿತ್ರರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಫಿಲೋಮಿನಾ ಕಾಲೇಜು ಹಿರಿಯ ವಿದ್ಯಾರ್ಥಿ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here