ನಿಡ್ಪಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರ ಎಲ್ಲಾ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ

0

ಅಧ್ಯಕ್ಷರಾಗಿ ನ್ಯಾಯವಾದಿ ಎ.ರಾಧಾಕೃಷ್ಣ ರೈ, ಉಪಾಧ್ಯಕ್ಷರಾಗಿ ಹರೀಶ್ ಕುಮಾರ್. ಪಿ ಆಯ್ಕೆ

ನಿಡ್ಪಳ್ಳಿ; ನಿಡ್ಪಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಯ ಆಡಳಿತ ಮಂಡಳಿಗೆ ನಿರ್ದೇಶಕರಾಗಿ ಎಲ್ಲಾ ಹನ್ನೆರಡು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಾಮಾನ್ಯ ವರ್ಗ ಏಳು ಸ್ಥಾನಗಳಿಗೆ ಎ.ರಾಧಾಕೃಷ್ಣ ರೈ ಆನಾಜೆ, ಹರೀಶ್ ಕುಮಾರ್ ಪಳಂಬೆ, ನಾಗೇಶ ಗೌಡ ಪುಳಿತ್ತಡಿ, ಲಿಂಗಪ್ಪ ಗೌಡ ಪಳಂಬೆ, ಲೋಕನಾಥ ರೈ ಬಾಜೋಳಿ, ಕಾಶ್ಮೀರ ಡಿ’ ಸೋಜಾ ಪಳಂಬೆ, ಗಂಗಾಧರ ಸಿ.ಎಚ್ ಚೆಲ್ಯರಮೂಲೆ,ಹಿಂದುಳಿದ ವರ್ಗ ಎ ಮೀಸಲು ಒಂದು ಸ್ಥಾನಕ್ಕೆ ಶೀನಪ್ಪ ಪೂಜಾರಿ ಪಟ್ಟೆ, ಪರಿಶಿಷ್ಟ ಪಂಗಡ ಮೀಸಲು ಒಂದು ಸ್ಥಾನಕ್ಕೆ ನಾರ್ಣಪ್ಪ ನಾಯ್ಕ ಕೂಟೇಲು ಹಾಗೂ ಮಹಿಳಾ ಮೀಸಲು ಎರಡು ಸ್ಥಾನಕ್ಕೆ ಡೆಲಿಫಿನ್ ಡಿ’ ಸೋಜಾ ಪಟ್ಟೆ ಹಾಗೂ ಗೀತಾ ಕೂಟೇಲು ಮತ್ತು ಪರಿಶಿಷ್ಟ ಜಾತಿ ಒಂದು ಸ್ಥಾನಕ್ಕೆ ದೇವಕಿ ಇವರು   ಉಮೇದುವಾರಿಕೆ ಸಲ್ಲಿಸಿದ್ದರು. ಪ್ರತಿ ಸ್ಥಾನಕ್ಕೆ ತಲಾ ಒಂದೊಂದು ಉಮೇದುವಾರರು ನಾಮ ಪತ್ರ ಸಲ್ಲಿಸಿದ ಕಾರಣ ಚುನಾವಣೆ ನಡೆಯದೆ ಎಲ್ಲಾ ಸ್ಥಾನಗಳಿಗೂ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ಶೋಭಾ ಎನ್.ಎಸ್ ಘೋಷಿಸಿದರು. 

ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಜು.2 ರಂದು ಸಂಘದ ಆವರಣದಲ್ಲಿ ನಡೆಯಿತು.ಅಧ್ಯಕ್ಷರಾಗಿ ನ್ಯಾಯವಾದಿ ಎ.ರಾಧಾಕೃಷ್ಣ ರೈ ಆನಾಜೆ ಹಾಗೂ ಉಪಾಧ್ಯಕ್ಷರಾಗಿ ಹರೀಶ್ ಕುಮಾರ್ ಪಳಂಬೆ ಅವಿರೋಧವಾಗಿ ಆಯ್ಕೆಯಾದರು.ರಿಟರ್ನಿಂಗ್ ಅಧಿಕಾರಿ ಶೋಭಾ ಎನ್.ಎಸ್ ರವರ ನೇತೃತ್ವದಲ್ಲಿ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಸಂಘದ ಮುಖ್ಯ ಕಾರ್ಯದರ್ಶಿ ದಯಾಮಣಿ ಎಸ್ ರೈ ಹಾಗೂ ಸಿಬ್ಬಂದಿ ಲತಾ ಸಹಕರಿಸಿದರು.

LEAVE A REPLY

Please enter your comment!
Please enter your name here