ಕೆಮ್ಮಿಂಜೆ ನಿವಾಸಿ ಎಸ್.ಎಂ.ಮಹಮ್ಮದ್ ನಿಧನ

0

ಪುತ್ತೂರು: ಕೆಮ್ಮಿಂಜೆ ಷಣ್ಮುಖ ದೇವಸ್ಥಾನ ಬಳಿಯ ನಿವಾಸಿಯಾಗಿರುವ ಎಸ್.ಎಂ.ಮಹಮ್ಮದ್(60) ಹೃದಯಾಘಾತದಿಂದ ಜು.2ರಂದು ನಿಧನರಾಗಿದ್ದಾರೆ.

ಈ ಹಿಂದೆ ಮುಂಬೈನಲ್ಲಿ ಸೆಂಟ್ರಲ್ ರೈಲ್ವೇ ಉದ್ಯೋಗದಲ್ಲಿದ್ದ ಅವರು, ನಿವೃತ್ತಿ ಬಳಿಕ ಪುತ್ತೂರಿನ ಕೂರ್ನಡ್ಕದಲ್ಲಿ ನೆಲೆಸಿದ್ದರು. ಹೃದಯ ಬೇನೆಯ ಹಿನ್ನೆಲೆಯಲ್ಲಿ ತಕ್ಷಣ ಅವರನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಳಿಕ ಅಲ್ಲಿನ ವೈದ್ಯರ ಸೂಚನೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯುವ ವೇಳೆ ದಾರಿಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here