ನನ್ಯದಲ್ಲಿ ಕಾರು, ಗೂಡ್ಸ್ ವಾಹನಅಪಘಾತ – ಕಾರಿನಲ್ಲಿದ್ದವರಿಗೆ ಗಾಯ

0

ಪುತ್ತೂರು:ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಮಾಡ್ನೂರು ಗ್ರಾಮದ ನನ್ಯ ಎಂಬಲ್ಲಿ ಕಾರು ಮತ್ತು ಟಾಟಾ ಝಿಫ್ ಗೂಡ್ಸ್ ವಾಹನ ನಡುವೆ ಅಪಘಾತ ಸಂಭವಿಸಿದ್ದು, ಅದರಲ್ಲಿದ್ದ ವ್ಯಕ್ತಿಯೊಬ್ಬರಿಗೆ ತೀವ್ರ ಗಾಯವಾಗಿದೆ.
ಬೆಳ್ತಂಗಡಿ ಗ್ರಾಮದ ಬೊಳ್ಮನಾರು ರಾಜೇಂದ್ರ ಎಂಬವರು ಚಲಾಯಿಸುತ್ತಿದ್ದ ಕಾರು ಮತ್ತು ಅಬ್ದುಲ್ ರಹಿಮಾನ್ ಎಂಬವರು ಚಲಾಯಿಸುತ್ತಿದ್ದ ಟಾಟಾ ಝಿಫ್ ಗೂಡ್ಸ್ ವಾಹನ ಮಧ್ಯೆ ಡಿಕ್ಕಿಯಾಗಿದೆ. ಕಾರು ಚಾಲಕ ರಾಜೇಂದ್ರರವರ ತಂದೆಗೆ ಗಾಯವಾಗಿದೆ. ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here