ಉಪ್ಪಳಿಗೆ:ಧರೆ ಕುಸಿದು ಮನೆಯ ಅಂಗಳ, ಕೃಷಿಗೆ ಹಾನಿ

0

ಪುತ್ತೂರು:ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜು.3ರಂದು ಸಂಜೆ ಉಪ್ಪಳಿಗೆ ನಿವಾಸ ಧನಂಜಯ ನಾಕ್‌ರವರ ಮನೆ ಸಮೀಪ ಧರೆ ಕುಸಿದು ಮನೆಯ ಅಂಗಳ ಹಾಗೂ ಕೃಷಿಗೆ ಹಾನಿಯುಂಟಾಗಿದೆ.


ಜು.3ರಂದು ಸಂಜೆ ಸುರಿದ ಮಳೆಗೆ ಗುಡ್ಡ ಕುಸಿದು, ಮನೆಯ ಅಂಗಳ, ತಡೆಗೋಡೆ, ಬಾಳೆಗಿಡ, ಅಡಿಕೆ ಗಿಡ, ತೆಂಗಿನ ಮರಗಳಿಗೆ ಹಾನಿಯುಂಟಾಗಿದ್ದು ಸುಮಾರು ರೂ.2ಲಕ್ಷ ನಷ್ಟ ಉಂಟಾಗಿದೆ ಎಂದು ಧನಂಜಯರವರು ತಿಳಿಸಿದ್ದಾರೆ.
ತಹಶೀಲ್ದಾರ್ ಶಿವಶಂಕರ, ಬೆಟ್ಟಂಪಾಡಿ ಗ್ರಾ.ಪಂ ಸದಸ್ಯ ಪ್ರಕಾಶ್ ರೈ ಬೈಲಾಡಿ, ಕಾಂಗ್ರೆಸ್ ಮುಖಂಡ ಕೃಷ್ಣಪ್ರಸಾದ್ ಆಳ್ವ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

LEAVE A REPLY

Please enter your comment!
Please enter your name here