ಪಡ್ನೂರು ದೇವಿನಗರದಲ್ಲಿ ಬರೆ ಕುಸಿತ- ಅಪಾಯದ ಅಂಚಿನಲ್ಲಿ ಕೂಲಿ ಕಾರ್ಮಿಕರ ಮನೆ

0

ಪುತ್ತೂರು: ಬನ್ನೂರು ಗ್ರಾ.ಪಂ ವ್ಯಾಪ್ತಿಯ ಪಡ್ನೂರು ದೇವಿನಗರಲ್ಲಿ ರಸ್ತೆ ಬದಿಯ ಬರೆಯೊಂದು ಜು.4ರಾತ್ರಿ ಕುಸಿದು ಮೇಲಿರುವ ಕೂಲಿ ಕಾರ್ಮಿಕರೊಬ್ಬರ ಮನೆ ಅಪಾಯದ ಸ್ಥಿತಿಯಲ್ಲಿದೆ.


ಪಡ್ನೂರು ಗ್ರಾಮದ ಕೂಲಿ ಕಾರ್ಮಿಕ ರಾಮಣ್ಣ ಮೂಲ್ಯ ಎಂಬವರ ಮನೆ ಬರೆ ಕುಸಿತದಿಂದ ಅಪಾಯದ ಅಂಚಿನದಲ್ಲಿದೆ. ಕೇವಲ 3 ಸೆಂಟ್ಸ್ ಜಾಗದಲ್ಲಿ ರಾಮಣ್ಣ ಮೂಲ್ಯ ಅವರ ಮನೆಯಿದ್ದು, ಇದೀಗ ಬರೆ ಕುಸಿತದಿಂದಾಗಿ ಅವರ ಮನೆ ಅಪಾಯದಲ್ಲಿದೆ. ಸ್ಥಳಕ್ಕೆ ಗ್ರಾ.ಪಂ ಅಧ್ಯಕ್ಷೆ ಜಯ ಮತ್ತು ಸದಸ್ಯ ಶೀನಪ್ಪ ಮೂಲ್ಯ ಹಾಗು ಪಿಡಿಒ ಅವರು ಭೇಟಿ ನೀಡಿ ಪರಿಶೀಲಿಸಿದ್ದರೆ. ಸದ್ಯ ಕುಸಿಯುತ್ತಿರುವ ಬರೆಗೆ ತರ್ಪಾಲು ಹೊದಿಕೆ ಹಾಕಿ ತಾತ್ಕಾಲಿಕ ಮನೆ ರಕ್ಷಣೆ ಮಾಡಲಾಗಿದೆ.

LEAVE A REPLY

Please enter your comment!
Please enter your name here