ರೆಂಜಿಲಾಡಿ: ಮನೆ ಸಮೀಪದ ತಡೆಗೋಡೆ ಕುಸಿತ – ಮನೆಗೆ ಹಾನಿ ಭೀತಿ- ಮನೆ ಮಂದಿ ಸ್ಥಳಾಂತರ

0

ಕಡಬ: ಇತ್ತೀಚೆಗೆ ಸುರಿಯುತ್ತಿರುವ ಬಾರೀ ಮಳೆಗೆ ಮನೆ ಸಮಿಪದ ತಡೆಗೋಡೆ ಕುಸಿದು ಶೌಚಾಲಯ, ಮನೆಗೆ ಹಾನಿಯಾಗಿದ್ದು ಮುಂಜಾಗ್ರತಾ ಹಿನ್ನೆಲೆಯಲ್ಲಿ ಮನೆ ಮಂದಿಯ ಸ್ಥಳಾಂತರಕ್ಕೆ ಸೂಚಿಸಲಾಗಿದೆ.
ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ರೆಂಜಿಲಾಡಿ ಗ್ರಾಮದ ಪರಮೇಶ್ವರ ಸಂಕೇಶ ಎಂಬವರ ಮನೆ ಸಮೀಪದ ತಡೆಗೋಡೆ ಕುಸಿದು, ಸಮೀಪದ ಶೌಚಾಲಯ, ಸ್ನಾನಗೃಹದಲ್ಲಿ ಬಿರುಕು ಕಂಡಿದೆ. ಒಂದು ಭಾಗದ ಮನೆಯ ಗೋಡೆಯಲ್ಲೂ ಬಿರುಕು ಉಂಟಾಗಿದೆ. ಘಟನೆ ಬಗ್ಗೆ ಕಂದಾಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮುಂಜಾಗ್ರತಾ ಹಿನ್ನೆಲೆಯಲ್ಲಿ ಮನೆ ಮಂದಿಯ ಸ್ಥಳಾಂತರಕ್ಕೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮನೆ ಮಂದಿ ಬೇರೆ ಕಡೆಗೆ ತಾತ್ಕಾಲಿಕವಾಗಿ ಸ್ಥಳಾಂತರಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಕಂದಾಯ ಅಧಿಕಾರಿಗಳು, ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳು, ಸ್ಥಳೀಯ ಪ್ರಮುಖರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here