![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು:ಕಲಿಯುಗ ಕಲೆ,ಕಾರಣಿಕ ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿರುವ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಮಜಲು ಸ್ವಾಮಿ ಕೊರಗಜ್ಜ, ಅಗ್ನಿ ಕಲ್ಲುರ್ಟಿ ದೈವಸ್ಥಾನದಲ್ಲಿ ಜು.9ರಂದು ಮಧ್ಯಾಹ್ನ 12 ಗಂಟೆಗೆ ಸ್ವಾಮಿ ಕೊರಗಜ್ಜ ದೈವದ ಹಗಲು ಕೋಲ, ಅಗೇಲು ಸೇವೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಹಲವು ಭಕ್ತಾದಿಗಳು ಪಾಲ್ಗೊಂಡಿದ್ದರು.
ಕ್ಷೇತ್ರದಲ್ಲಿ ಪ್ರತಿ ತಿಂಗಳ ಸಂಕ್ರಮಣದಂದು ರಾತ್ರಿ ಕೆಂಡದರ್ಶನ ಸೇವೆ, ಅಗ್ನಿ ಕಲ್ಲುರ್ಟಿ ಮತ್ತು ಸ್ವಾಮಿ ಕೊರಗಜ್ಜ ದೈವಕ್ಕೆ ಕೋಲ,ಅಗೇಲು ಸೇವೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯುತ್ತದೆ. ಸಂಕ್ರಮಣ ದಿನ ಬಿಟ್ಟು ಪ್ರತಿ ಆದಿತ್ಯವಾರ ಮಧ್ಯಾಹ್ನ ಸ್ವಾಮಿ ಕೊರಗಜ್ಜ ದೈವದ ಹಗಲು ಕೋಲ, ಅಗೇಲು ಸೇವೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯುತ್ತದೆ,ಪ್ರತಿ ಸೋಮವಾರ, ಮಂಗಳವಾರ, ಶುಕ್ರವಾರ ಮತ್ತು ಶನಿವಾರ ಪ್ರಶ್ನಾ ಚಿಂತನೆ ಹಾಗೂ ಬುಧವಾರ, ಗುರುವಾರ ಸೂಚಿತ ಪರಿಹಾರ ಕಾರ್ಯ ನಡೆಯುತ್ತದೆ ಎಂದು ಕ್ಷೇತ್ರದ ಧರ್ಮದರ್ಶಿ ಮಣಿಸ್ವಾಮಿ ತಿಳಿಸಿದ್ದಾರೆ.
![](https://puttur.suddinews.com/wp-content/uploads/2023/07/f422bb9e-2fc7-45c0-a6c3-0ba6dfdfa512.jpg)
![](https://puttur.suddinews.com/wp-content/uploads/2023/07/7a028759-239d-4c28-a111-d1399f026af3.jpg)
ಜು.16:ಸಂಕ್ರಮಣ ದಿನ ಹಗಲು ಕೋಲ
![](https://puttur.suddinews.com/wp-content/uploads/2023/07/51c56632-9aff-489f-b97c-c2ca77620529.jpg)
ಪುತ್ತೂರು: ಜುಲೈ16ರ ಆದಿತ್ಯವಾರದಂದು ತಿಂಗಳ ಸಂಕ್ರಮಣದಂಗವಾಗಿ ರಾತ್ರಿ ಬದಲು ಮಧ್ಯಾಹ್ನ 12 ಗಂಟೆಯಿಂದ ದೈವಗಳಿಗೆ ಕೋಲ, ಅಗೇಲು ಸೇವೆ ನಡೆಯಲಿದೆ. ಆರಂಭದಲ್ಲಿ ಕೆಂಡದರ್ಶನ ಸೇವೆ ನಡೆದು ಬಳಿಕ ಅಗ್ನಿ ಕಲ್ಲುರ್ಟಿ ಕೋಲ, ಅಗೇಲು ಸೇವೆಯಾಗಿ ಸ್ವಾಮಿ ಕೊರಗಜ್ಜ ದೈವದ ಕೋಲ, ಅಗೇಲು ಸೇವೆ ನಡೆಯಲಿದೆ.ಈ ಸಂದರ್ಭ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಮಣಿಸ್ವಾಮಿ, ಧರ್ಮದರ್ಶಿ