ಒಕ್ಕೆತ್ತೂರಿನಲ್ಲಿ ಗುಡ್ಡೆ ಜರಿಯುವ ಭೀತಿ – ಮನೆ ಮಂದಿ ಸ್ಥಳಾಂತರಿಸಿ ಆರ್ಥಿಕ ನೆರವು ನೀಡಿದ ಪುತ್ತಿಲ ಪರಿವಾರ

0

ಪುತ್ತೂರು: ಬಾರಿ ಮಳೆಗೆ ಒಕ್ಕೆತ್ತೂರು ಕೊಡಂಗೆ ಸುರೇಶ್ ಎಂಬವರ ಮನೆ ಹಿಂಬದಿಯ ಗುಡ್ಡೆ ಜರಿಯುವ ಹಂತದಲ್ಲಿರುವ ಸಂದರ್ಭ ಮನೆ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ ಬಳಿಕ ಪುತ್ತಿಲ ಪರಿವಾರ ಆ ಕಟುಂಬಕ್ಕೆ ಆರ್ಥಿಕ ನೆರವು ಮಾಡಿದೆ.
ಗುಡ್ಡೆ ಜರಿದು ಮನೆಗೆ ಆತಂಕವಾಗುವ ಭೀತಿಯನ್ನು ಸರಕಾರದ ಗಮನಕ್ಕೆ ತರುವಂತೆ ಅಧಿಕಾರಿಗಳ ಜೊತೆ ಪುತ್ತಿಲ ಪರಿವಾರದಿಂದ ಮಾತನಾಡಲಾಗಿತ್ತು. ಬಳಿಕ ಅವರನ್ನು ವಿಟ್ಲದ ಪ್ರವಾಸಿ ಬಂಗಲೆಗೆ ಸ್ಥಳಾಂತರಿಸಲಾಗಿತ್ತು. ಇದೀಗ ಪುತ್ತಿಲ ಪರಿವಾರದಿಂದ ಆ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಾಗಿದೆ ಎಂದು ಪುತ್ತಿಲ ಪರಿವಾರ ಪ್ರಕಟಣೆ ತಿಳಿಸಿದೆ. ಆರ್ಥಿಕ ನೆರವು ನೀಡುವ ಸಂದರ್ಭ ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರದ ವಿಟ್ಲದ ಪ್ರಮುಖರಾದ ರಘುರಾಮ ರೈ, ಶಿವಾನಂದ್, ಲಕ್ಷ್ಮಣ್, ಶ್ರೀಕೃಷ್ಣ, ಮೋಹನ್ ಸೇರಾಜೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here