ನೆಹರುನಗರ ಸೀತಾರಾಮ ಶೆಣೈ ರವರ ಶ್ರದ್ಧಾಂಜಲಿ ಸಭೆ

0

ಪುತ್ತೂರು: ಜೂ.30ರಂದು ನಿಧನರಾದ ವಿವೇಕಾನಂದ ಕಲಾ ವಿಜ್ಙಾನ ಹಾಗೂ ವಾಣಿಜ್ಯ ಮಹಾ ವಿದ್ಯಾಲಯದ ಕಛೇರಿಯ ನಿವೃತ್ತ ಅಧೀಕ್ಷಕ ಸೀತಾರಾಮ ಶೆಣೈ ನೆಹರುನಗರ ಇವರ ವೈಕುಂಠ ಸಮಾರಾಧನೆ ಹಾಗೂ ಶ್ರದ್ಧಾಂಜಲಿ ಸಭೆ ಜು.9 ರಂದು ಭಾರತ್ ಮಾತಾ ಹಾಲ್ ಕಲ್ಲೇಗ, ನೆಹರುನಗರ ಇಲ್ಲಿ ನಡೆಯಿತು.


ನಗರಸಭೆ ಮಾಜಿ ಅಧ್ಯಕ್ಷರಾದ ಜೀವಂಧರ್ ಜೈನ್, ವೇದಮೂರ್ತಿ ಜಯರಾಮ ಭಟ್, ಸಂಜೀವ ನಾಯಕ್ ಕಲ್ಲೇಗ, ಜ್ಯೋತಿಷಿ ಇ. ಗೋಪಾಲಕೃಷ್ಣ ಭಟ್, ವಿವೇಕಾನಂದ ಕಾಲೇಜಿನ ನಿವೃತ್ತ ಅಧೀಕ್ಷಕ ಜಗನ್ನಾಥ ಮೃತರಿಗೆ ನುಡಿನಮನ ಸಲ್ಲಿಸಿದರು. ಬಳಿಕ ಒಂದು ನಿಮಿಷದ ಮೌನ ಪ್ರಾರ್ಥನೆ ಮಾಡಲಾಯಿತು ನಂತರ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಮೃತರ ಸಹೋದರರಾದ ಡಾ. ವೈ. ಉಮಾನಾಥ ಶೆಣೈ, ರಾಜಗೋಪಾಲ ಶೆಣೈ, ಸಹೋದರನ ಪುತ್ರ ಆಳ್ವಾಸ್ ಕಾಲೇಜಿನ ಇಂಗ್ಲೀಷ್ ಪ್ರಧ್ಯಾಪಕ ರವಿ ಶೆಣೈ ಮತ್ತು ಮನೆಯವರು, ಬಂಧು-ಬಳಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here