ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘದಿಂದ ಹಿರಿಯ ಯಕ್ಷಗಾನ ಕಲಾವಿದರಿಬ್ಬರಿಗೆ ಗೌರವಾರ್ಪಣೆ

0


ಪುತ್ತೂರು: ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘ ಪುತ್ತೂರು ಇವರ ನೇತೃತ್ವದಲ್ಲಿ ಯಕ್ಷಗಾನ ಹಿರಿಯ ಕಲಾವಿದರಿಬ್ಬರಿಗೆ ಗೌರವಾರ್ಪಣೆ ಕಾರ್ಯಕ್ರಮ ಜು. 9ರಂದು ಕುಲಾಲ ಸಹಕಾರ ಭವನದಲ್ಲಿ ನಡೆಯಿತು.

ಹಿರಿಯ ಕಲಾವಿದರಾದ ಬಟ್ಯ ಮೂಲೆ ಲಕ್ಷ್ಮೀ ನಾರಾಯಣ ಭಟ್ ಮತ್ತು ಕಟೀಲು ಮೇಳದ ಹಾಸ್ಯ ಕಲಾವಿದರಾದ ರವಿಶಂಕರ್ ಭಟ್ ವಳಕುಂಜ ಅವರಿಗೆ ಗೌರವಾರ್ಪಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಯಕ್ಷಗಾನ ಹಿಮ್ಮೇಳ ಕಲಾವಿದರಾದ ಸುಧೀಶ್ ಪಾಣಾಜೆ, ನಾರಾಯಣ ಶರ್ಮ ಹಾಗು ಮಧುಸೂಧನ್ ಅವರನ್ನು ಗೌರವಿಸಲಾಯಿತು. ತಂಡದ ಗುರುಗಳಾದ ಗಣೇಶ ಪಾಲೆಚ್ಚಾರ್ರವರು ಗೌರಾವರ್ಪಣೆ ಮಾಡಿದರು. ಉಪ್ಪಿನಂಗಡಿ ಯಕ್ಷ ಕಲಾ ಸಂಘದ ರುವಾರಿ ಯಚ್. ಟಿ ರವೀಶ್‌ರವರು ಅಧ್ಯಕ್ಷತೆ ವಹಿಸಿದ್ದರು. ಸುಜಾತ ಜನಾರ್ಧನ ಸ್ವಾಗತಿಸಿದರು. ಅನ್ನಫೂರ್ಣ ಎಸ್.ಕೆ ರಾವ್ ಮತ್ತು ಚಂದ್ರಕಲಾ ರವರು ಸನ್ಮಾನ ಪತ್ರ ವಾಚಿಸಿದರು. ರಾಮ್ ಭಟ್ ಶೇವಿರೆಯವರು ಸಹಕರಿಸಿದರು. ಜಿನ್ನಪ್ಪ ಗೌಡ ಕೆದಿಲರವರು ವಂದಿಸಿದರು.

LEAVE A REPLY

Please enter your comment!
Please enter your name here