ಜು.22: ನೆಕ್ಕಿಲಾಡಿ ಶಾಲೆಯಲ್ಲಿ ಗ್ರಾಮ ಸಾಹಿತ್ಯ ಸಂಭ್ರಮ ಸರಣಿ ಕಾರ್ಯಕ್ರಮ-7

0

ಪುತ್ತೂರು: ‘ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ’ ಎಂಬ ಘೋಷವಾಕ್ಯದಲ್ಲಿ ನಡೆಯುವ ಗ್ರಾಮ ಸಾಹಿತ್ಯ ಸಂಭ್ರಮ ಸರಣಿ ಕಾರ್ಯಕ್ರಮ -7 ನೆಕ್ಕಿಲಾಡಿ ಸ.ಹಿ.ಪ್ರಾ. ಶಾಲೆಯಲ್ಲಿ ಜು.22ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ರ ತನಕ ನಡೆಯಲಿದೆ.


ಕಾರ್ಯಕ್ರಮದಲ್ಲಿ ಬಾಲಕಥಾಗೋಷ್ಠಿ (ವಿದ್ಯಾರ್ಥಿಗಳಿಗಾಗಿ), ಬಾಲಕವಿ ಗೋಷ್ಠಿ (ವಿದ್ಯಾರ್ಥಿಗಳಿಗಾಗಿ), ಯುವ ಕವಿಗೋಷ್ಠಿ (ಸಾರ್ವಜನಿಕ ವಿಭಾಗ) ನಡೆಯಲಿದ್ದು ಸಾಹಿತ್ಯಕ್ಕೆ ನೆಕ್ಕಿಲಾಡಿ ಗ್ರಾಮದ ಕೊಡುಗೆ ಎಂಬ ವಿಚಾರದಲ್ಲಿ ಉಪನ್ಯಾಸ ನಡೆಯಲಿದೆ. ಜತೆಗೆ ನೆಕ್ಕಿಲಾಡಿ ಗ್ರಾಮದ ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ ಎಂದು ಕ.ಸಾ.ಪ ಅಧ್ಯಕ್ಷ ಉಮೇಶ್ ನಾಯಕ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here