ನಾಳೆ ಜು.13: ಪುಣಚ ಶ್ರೀ ಮಹಿಷಮರ್ದಿನಿ ಸಿಂಗಾರಿ ಮೇಳದ ರಂಗಪ್ರವೇಶ

0

ಪುತ್ತೂರು: ಶ್ರೀ ಮಹಿಷಮರ್ದಿನಿ ಸಿಂಗಾರಿ ಮೇಳ ಪುಣಚ ಇದರ ರಂಗಪ್ರವೇಶವು ಜು.13ರಂದು ಸಂಜೆ 6 ಗಂಟೆಗೆ ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಜರಗಲಿರುವುದು.
ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಬನ್ನಿಂತಾಯರು ದೀಪ ಪ್ರಜ್ವಲನೆ ಮಾಡಲಿದ್ದು, ಆಡಳಿತ ಸಮಿತಿ ಅಧ್ಯಕ್ಷ ಎಸ್ ಆರ್ ರಂಗಮೂರ್ತಿ ಸಭಾಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಆಡಳಿತ ಸಮಿತಿ ಉಪಾಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು, ಕೋಶಾಧಿಕಾರಿ ಶಂಕರನಾರಾಯಣ ಭಟ್ಟ್ ಮಲ್ಯ, ಪ್ರಧಾನ ಕಾರ್ಯದರ್ಶಿ ಶ್ರೀಧರ ಶೆಟ್ಟಿ ದೇವರಗುಂಡಿ, ಸದಸ್ಯರುಗಳಾದ ಹರ್ಷ ಎ.ಎಸ್, ಉದಯ ಕುಮಾರ್ ದಂಬೆ, ರವಿಶಂಕರ ಶಾಸ್ತ್ರಿ ಮಣಿಲ, ಬಾಳಿಲ ಪ್ರೌಢ ಶಾಲಾ ಅಧ್ಯಾಪಕ ಲೋಕೇಶ್ ಬೆಳ್ಳಿಗೆ, ಸಿಂಗಾರಿ ಮೇಳದ ಮುಖ್ಯ ಗುರು ಚಂದ್ರಹಾಸ ಮಣಿಯಾಣಿ ಅಗಲ್ಪಾಡಿ ಭಾಗವಹಿಸಲಿದ್ದಾರೆ. ಬಳಿಕ ಚೆಂಡೆವಾದನ, ಅನ್ನ ಪ್ರಸಾದ ನಡೆಯಲಿದೆ ಎಂದು ಸಿಂಗಾರಿ ಮೇಳದ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here