ಬಳಕ್ಕ ಅಪಾಯಕಾರಿ ಮರ ತೆರವು

0

ಪುತ್ತೂರು: ಸಂಟ್ಯಾರು-ಪಾಣಾಜೆ ರಸ್ತೆಯ ಬಳಕ್ಕ ಎಂಬಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ರಸ್ತೆಗೆ ವಾಲಿ ನಿಂತು ಅಪಾಯಕಾರಿಯಾಗಿದ್ದ ಮರಗಳನ್ನು ತೆರವುಗೊಳಿಸಲಾಯಿತು.

ಸಾರ್ವಜನಿಕ ಹಿತದೃಷ್ಠಿಯಿಂದ ಕೃಷ್ಣಪ್ರಸಾದ್ ಆಳ್ವರವರು ಶಾಸಕ ಅಶೋಕ್ ಕುಮಾರ್ ರೈಯವರಿಗೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿರುವ ಶಾಸಕರು ಅರಣ್ಯ ಇಲಾಖೆಗೆ ನೀಡಿದ ಸೂಚನೆಯಂತೆ ಅರಣ್ಯ ಇಲಾಖೆಯವರು 24 ಗಂಟೆಯೊಳಗೆ ಅಪಾಯಕಾರಿ ಸ್ಥಿತಿಯಲ್ಲಿದ್ದ ಮರಗಳನ್ನು ತೆರವುಗೊಳಿಸಿದರು. ಸಾರ್ವಜನಿಕ ಹಿತದೃಷ್ಠಿಯಿಂದ ಸ್ಪಂಧಿಸಿರುವ ಕೃಷ್ಣಪ್ರಸಾದ್ ಆಳ್ವ ಹಾಗೂ ಶಾಸಕ ಅಶೋಕ್ ಕುಮಾರ್ ರೈಯವರ ಕಾಳಜಿಗೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here