ಬಾರ್ಯ:ಬಾಲಕ ಆತ್ಮಹತ್ಯೆ

0

ಉಪ್ಪಿನಂಗಡಿ:ಬಾರ್ಯದಲ್ಲಿ ಬಾಲಕನೋರ್ವ ಮನೆಯ ಹಿಂಬದಿ ಮಾಡಿನ ಕಬ್ಬಿಣದ ಅಡ್ಡಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾರ್ಯದಲ್ಲಿರುವ ಬಿ.ಎನ್.ರಾಜೇಶ್ ರಾವ್‌ರವರ ಮನೆಯಲ್ಲಿ ಕೆಲಸ ಮಾಡುತ್ತಾ ಅಲ್ಲೇ ತೋಟದ ಮನೆಯಲ್ಲಿ ವಾಸ ಮಾಡಿಕೊಂಡಿರುವ ಸುಕಾಂತಿ ಗುರಿಯರವರ ತಮ್ಮ ಹೇಮಂತ ಗುರಿಯ (17ವ.)ಆತ್ಮಹತ್ಯೆ ಮಾಡಿಕೊಂಡವರು.ಜು.11ರಂದು ಮಧ್ಯಾಹ್ನದಿಂದ ಸಂಜೆ ಅವಧಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಕೃತ್ಯವನ್ನು ಎಸಗಿಕೊಂಡಿರುವುದಾಗಿ ರಾಜೇಶ್ ರಾವ್ ಅವರು ನೀಡಿರುವ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here