ಕೂಡುರಸ್ತೆ ಮದ್ರಸದಲ್ಲಿ ಮುಅಲ್ಲಿಂ ಡೇ ಆಚರಣೆ

0

ಪುತ್ತೂರು: ಕೂಡುರಸ್ತೆ ರಿಫಾಯಿಯ್ಯ ಮದ್ರಸ ಕೂಡುರಸ್ತೆ ಇದರ ವತಿಯಿಂದ ಅಧ್ಯಾಪಕರ ದಿನಾಚರಣೆ ‘ಮುಅಲ್ಲಿಂ ಡೇ’ ಆಚರಿಸಲಾಯಿತು. ಮದ್ರಸ ಅಧ್ಯಾಪಕರಾದ ಇಕ್ಬಾಲ್ ಮುಸ್ಲಿಯಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಮಾಅತ್ ಉಪಾದ್ಯಕ್ಷ ಉಮ್ಮರ್ ಬಾಳಾಯ ಅಧ್ಯಕ್ಷತೆ ವಹಿಸಿದ್ದರು.
ಖತೀಬ್ ಬದ್ರುದ್ದೀನ್ ರಹ್ಮಾನಿ ಉದ್ಘಾಟಸಿ ಮುಅಲ್ಲಿಂ ಡೇ ಸಂದೇಶ ನೀಡಿದರು.

ಜಮಾಅತ್ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಸುಲ್ತಾನ್, ಆರ್‌ವೈಎಫ್ ಮಾಜಿ ಅಧ್ಯಕ್ಷ ಮಜೀದ್ ಬಾಳಾಯ ಮಾತನಾಡಿ ಶುಭ ಹಾರೈಸಿದರು.
ರಿಫಾಯಿಯ್ಯ ಓಲ್ಡ್ ಸ್ಟೂಡೆಂಟ್ ಅಸೋಸಿಯೇಶನ್ ವತಿಯಿಂದ ಉಸ್ತಾದರುಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸಭೆಯಲ್ಲಿ ಜಮಾಅತ್ ಕಾರ್ಯದರ್ಶಿ ಇಬ್ರಾಹಿಂ ಮುಸ್ಲಿಯಾರ್, ಆರ್‌ವೈಎಫ್ ಅಧ್ಯಕ್ಷ ಶರೀಫ್ ಎಲಿಯ, ಗೌರವಾಧ್ಯಕ್ಷರಾದ ಇಬ್ರಾಹಿಂ ಅಜ್ಜಿಕಲ್ಲು, ಆರ್‌ಓಎಸ್‌ಎ ಅಧ್ಯಕ್ಷ ಸಾದಿಕ್ ಬಾಳಾಯ ಉಪಸ್ಥಿತರಿದ್ದರು.

ಜಮಾಅತ್ ಪ್ರಮುಖರಾದ ನೌಶಾದ್ ಕಳಂಜ, ಇಬ್ರಾಹಿಂ, ಆರ್‌ಓಎಸ್‌ಎ ಕಮಿಟಿಯ ಪ್ರಮುಖರಾದ ನೌಫಲ್ ಅಜ್ಜಿಕಲ್ಲು, ನೌಫಲ್ ಕೂಡುರಸ್ತೆ, ನಾಸಿರ್ ಅಜ್ಜಿಕಲ್ಲು, ಹುಸೈನ್, ಇಸ್ಮಾಯಿಲ್ ಹಾಗೂ ಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here