ಜೆ.ವಿ. ಪಾರ್ವತಿ ಅಮ್ಮ ಇರ್ದೆ ನಿಧನ

0

ಬೆಟ್ಟಂಪಾಡಿ: ಇಲ್ಲಿನ ಇರ್ದೆ ಶ್ರೀಹರಿಹರ ನಿಲಯದ ಜೆ.ವಿ. ಪಾರ್ವತಿ ಅಮ್ಮ (73 ವ.) ರವರು ಅಲ್ಪಕಾಲದ ಅಸೌಖ್ಯದಿಂದ ಜು. 16ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.

ಮೃತರು ಪುತ್ರರಾದ ಜೆ. ಸತ್ಯನಾರಾಯಣ ಭಟ್, ರೆಂಜ ಶ್ರೀ ವಿಘ್ನೇಶ್ವರ ಸಂಕೀರ್ಣದಲ್ಲಿರುವ ಶ್ರೀದುರ್ಗಾ ಜನರಲ್ ಸ್ಟೋರ್ ನ ಮ್ಹಾಲಕ ದುರ್ಗಾಪ್ರಸಾದ್ ಜೆ., ಪ್ರಸನ್ನ ಕುಮಾರ್, ಗುರುಪ್ರಸಾದ್, ಪುತ್ರಿಯರಾದ ಅರುಣಾ, ಅಪರ್ಣಾ, ಅಳಿಯಂದಿರು, ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

ಮೃತರ ಮನೆಗೆ ಅರುಣ್ ಕುಮಾರ್ ಪುತ್ತಿಲ, ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ಪ್ರಧಾನ ಅರ್ಚಕ ವೇ.ಮೂ. ವೆಂಕಟ್ರಮಣ ಭಟ್, ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಅಭಿವೃದ್ಧಿ ಸಮಿತಿ ಅಧ್ಯಕ್ಷ ಮನಮೋಹನ ರೈ ಚೆಲ್ಯಡ್ಕ, ಮುಳಿಯ ಗೋವಿಂದ ಭಟ್, ಮುಳಿಯ ಶಿವರಾಮ ಭಟ್, ಶಿವಕುಮಾರ್ ಬಲ್ಲಾಳ್, ಸತೀಶ್ ಭಟ್ ನಡುಸಾರ್, ರಾಮಕೃಷ್ಣ ಭಟ್ ದೇವಮಣಿ, ವೇಣುಗೋಪಾಲ್ ಕಜೆ, ಜಗನ್ನಾಥ ರೈ ಕೊಮ್ಮಂಡ, ರಮೇಶ್ ಶೆಟ್ಟಿ ಕೊಮ್ಮಂಡ, ಅಮೃತ ಪ್ರಸಾದ್ ರೈ ಗುತ್ತು, ಬೆಟ್ಟಂಪಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ಮೃತರ ಅಂತಿಮದರ್ಶನ ಪಡೆದರು.

LEAVE A REPLY

Please enter your comment!
Please enter your name here