ಕೂಟೇಲು -ಗೋಳಿತ್ತಡಿ ರಸ್ತೆ ವೀಕ್ಷಿಸಿ ರಸ್ತೆ ಅಭಿವೃದ್ದಿಗೆ ಅನುದಾನ ನೀಡುವುದಾಗಿ ಶಾಸಕ ಅಶೋಕ್‌ ಕುಮಾರ್‌ ರೈ ಭರವಸೆ

0

ಪುತ್ತೂರು: ನಿಡ್ಪಳ್ಳಿ ಗ್ರಾಮದ ಕೂಟೇಲು- ಗೋಳಿತ್ತಡಿ ರಸ್ತೆ ತೀರಾ ಹದಗೆಟ್ಟಿದ್ದು ರಸ್ತೆಯ ಕಾಂಕ್ರೀಟ್ ಮಾಡುವಂತೆ ಸ್ಥಳೀಯರು ಬೇಡಿಕೆ ಇಟ್ಟಿದ್ದು ಶಾಸಕ ಅಶೋಕ್ ಕುಮಾರ್ ರೈ ಸ್ಥಳಕ್ಕೆ ಭೇಟಿ ನೀಡಿ ರಸ್ತೆಯನ್ನು ವಿಕ್ಷಣೆ ಮಾಡಿದರು.‌


ಈ ರಸ್ತೆಯು ಮಣ್ಣಿನ ರಸ್ತೆಯಾಗಿದ್ದು ತೀರಾ ಹದಗೆಟ್ಟಿದೆ. ಕಳೆದ ಹಲವು ವರ್ಷಗಳಿಂದ ರಸ್ತೆಯನ್ನು ಕಾಂಕ್ರೀಟ್ ಮಾಡುವಂತೆ ಮನವಿ ಮಾಡಿದ್ದರೂ ಇದುವರೆಗೂ ಯಾವ ಇಲಾಖೆಯಿಂದಲೂ ಅನುದಾನವನ್ನು ಒದಗಿಸಿಲ್ಲ. ಈ ರಸ್ತೆಯಲ್ಲಿ ಅನೇಕ ವಾಹನಗಳು ಸಂಚರಿಸುತ್ತಿದ್ದು ಮಳೆಗಾಲದಲ್ಲಿ ಕೆಸರುಮಯವಾಗುತ್ತಿದೆ. ರಸ್ತೆಗೆ ಈ ಬಾರಿ ಅನುದಾನವನ್ನು ನೀಡುವಂತೆ ನಿಡ್ಪಳ್ಳಿ ವಲಯ ಕಾಂಗ್ರೆಸ್ ಅಧ್ಯಕ್ಷರೂ ಗ್ರಾಪಂ ಅಭ್ಯರ್ಥಿಯೂ ಆಗಿರುವ ಸತೀಶ್ ಶೆಟ್ಟಿ ಶಾಸಕರಲ್ಲಿ ಮನವಿ ಮಾಡಿದರು. ರಸ್ತೆಯ ಅಭಿವೃದ್ದಿಗೆ ಮತ್ತು ತಡೆಗೋಡೆಗೆ ಅನುದಾನ ನೀಡುವುದಾಗಿ ಶಾಸಕರು ಭರವಸೆ ನೀಡಿದರು.


ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ, ಹರೀಶ್ ಪೂಜಾರಿ, ಸತೀಶ್ ರಐ ಹೊಸಮನೆ, ಭಾಸ್ಕರ ಕರ್ಕೆರ, ಪ್ರಶಾಂತ್ ಬರೆ, ವಸಂತ ನಿಡ್ಪಳ್ಳಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here