ಪುತ್ತೂರು ಧೀಶಕ್ತಿ ಮಹಿಳಾ ಯಕ್ಷ ಬಳಗದಿಂದ ತಾಳಮದ್ದಳೆ

0

ಪುತ್ತೂರು: ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ, ಪಡುಕುತ್ಯಾರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಸ್ವಾಮಿಗಳ ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ ಪುತ್ತೂರು ಧೀಶಕ್ತಿ ಮಹಿಳಾ ಯಕ್ಷಬಳಗ ತಂಡದಿಂದ ತಾಳಮದ್ದಳೆ “ಭಕ್ತ ಸುಧನ್ವ” ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಕು.ಶ್ರೇಯಾ ಆಚಾರ್ಯ ಆಲಂಕಾರು, ಮದ್ದಳೆಯಲ್ಲಿ ಮಾ.ಪ್ರಜೇಶ್ ಬಾಯಾರು ಚೆಂಡೆಯಲ್ಲಿ ಮಾ. ಅದ್ವೈತ್ ಕನ್ಯಾನ ಸಹಕರಿಸಿದರು. ಮುಮ್ಮೇಳದಲ್ಲಿ ಪದ್ಮಾ ಕೆ ಆರ್ ಆಚಾರ್ಯ(ಸುಧನ್ವ), ಜಯಲಕ್ಷ್ಮಿ ವಿ ಭಟ್(ಅರ್ಜುನ), ಶ್ರೀವಿದ್ಯಾ ಜೆ ರಾವ್(ಶ್ರೀ ಕೃಷ್ಣ), ಶುಭಾ ಪಿ ಆಚಾರ್ಯ(ಪ್ರಭಾವತಿ), ಪ್ರೇಮಾ ನೂರಿತ್ತಾಯ(ಹಂಸಧ್ವಜ) ಭಾಗವಹಿಸಿದರು. ಮಠದ ವತಿಯಿಂದ ಕಲಾವಿದರನ್ನು ಶಾಲು ಹೊದಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here