ನರೇಂದ್ರ ಮೋದಿ ಅಲೆಯ ಎದುರು ಕಾಂಗ್ರೆಸ್ ಕೊಚ್ಚಿ ಹೋಗುತ್ತದೆ – ನಳಿನ್ ಕುಮಾರ್ ಕಟೀಲ್

0

ಪುತ್ತೂರು: ದೇಶದಲ್ಲಿ ಕಾಂಗ್ರೆಸ್ ನಾಟಕ ಮಾಡಿ ಅಧಿಕಾರ ಹಿಡಿಯುವ ಷಡ್ಯಂತ್ರ ವಿಫಲವಾಗಲಿದೆ. ನರೇಂದ್ರ ಮೋದಿಯವರ ಅಲೆಯ ಎದುರು ಕಾಂಗ್ರೆಸ್ ಕೊಚ್ಚಿ ಹೋಗಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಹೇಳಿದರು.

ಪುತ್ತೂರು ಎಪಿಎಂಸಿ ರೈಲ್ವೇ ಅಂಡರ್ ಪಾಸ್ ವೀಕ್ಷಣೆ ಬಳಿಕ ಅವರು ಪತ್ರಿಕಾ ಮಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ಕಾಂಗ್ರೆಸ್ ಈ ದೇಶದಲ್ಲಿ ಹತ್ತಾರು ಪ್ರಧಾನ ಮಂತ್ರಿಗಳಿಗೆ ಬೆಂಬಲ ಕೊಟ್ಟು ಅವರನ್ನು ಉಚ್ಛಾಟನೆ ಮಾಡಿದೆ. ದೇವೆಗೌಡರನ್ನು ಅವರು ಕೆಳಗೆಳಿಸಿದರು ಯಾರನ್ನೂ ಅಧಿಕಾರದಲ್ಲಿ ಇರಲು ಬಿಡಲಿಲ್ಲ. ಇವತ್ತು ಕಾಂಗ್ರೆಸ್ ಮುಕ್ತವಾದ ವಾತಾವರಣ ಇಡಿ ದೇಶದಲ್ಲಿ ಇದೆ. ಕಾಂಗ್ರಸ್ ಒಂದೆ ಪಾರ್ಟಿಯಾಗಿ ಚುನಾವಣೆಯಲ್ಲಿ ನಿಲ್ಲಲು ಅರ್ಹತೆ ಇರದ ಪಾರ್ಟಿಯಾಗದೆ. ಹಾಗಾಗಿ ಬೇರೆ ಬೇರೆ ರೀತಿಯ ನಾಟಕವಾಡಿ ದೇಶದಲ್ಲಿ ಅಧಿಕಾರ ಹಿಡಿಯುವ ಷಡ್ಯಂತ್ರ ಮಾಡುತ್ತಿದೆ. ಕಳೆದ ಬಾರಿ ಈ ಪ್ರಯತ್ನ ಮಾಡಿದ್ದರು. ಆದರೆ ಇಡಿ ದೇಶದಲ್ಲಿ ನರೇಂದ್ರ ಮೋದಿಯವರ ಮೇಲೆ ಎಲ್ಲರಿಗೂ ವಿಶ್ವಾಸವಿದೆ. ನರೇಂದ್ರ ಮೋದಿಯವರ ಅಲೆಯ ಎದುರು ಕಾಂಗ್ರಸ್ ಕೊಚ್ಚಿ ಹೋಗಲಿದೆ ಎಂದರು.

LEAVE A REPLY

Please enter your comment!
Please enter your name here