ಕೆಯ್ಯೂರು ಪುತ್ತಿಲ ಪರಿವಾರ ಘಟಕದಿಂದ ಬಸ್ಸು ತಂಗುದಾಣ ಸ್ವಚ್ಛತಾ ಕಾರ್ಯಕ್ರಮ

0

ಕೆಯ್ಯೂರು :  ಕೆಯ್ಯೂರು ಪುತ್ತಿಲ ಪರಿವಾರ ಘಟಕದ ಸದಸ್ಯರಿಂದ, ಕೆಯ್ಯೂರು ಗ್ರಾಮದ ವ್ಯಾಪ್ತಿಯಲ್ಲಿ ಬರುವ 8 ಬಸ್ ನಿಲ್ದಾಣಗಳನ್ನು ಮತ್ತು ಅವುಗಳ ಸುತ್ತಲಿನ ಪರಿಸರವನ್ನು ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಅಂಕತ್ತಡ್ಕ, ಮಾಡಾವು ಕಟ್ಟೆ, ಬದ್ರಿಯಾ ಮಸೀದಿ ಬಳಿ, ಸಂತೋಷ್ ನಗರ, ಶಾಲಾ ಬಳಿ, ದೇವಿನಗರ, ಬಸ್ಸು ತಂಗುದಾಣವನ್ನು ನೀರು ಹಾಕಿ ತೊಳೆದು ಸ್ವಚ್ಛ ಮಾಡಲಾಯಿತು. ಸುತ್ತಲಿನ ಪ್ರದೇಶದ ಕಸ ಕಡ್ಡಿಗಳನ್ನು ಮತ್ತು  ಸುತ್ತಲೂ ಹರಡಿದ ಪೊದೆಗಳನ್ನು ತೆಗೆದು ಪಿಕಪ್ ವಾಹನದಲ್ಲಿ ಸಾಗಿಸಿ ವಿಲೇವಾರಿ ಮಾಡಲಾಯಿತು. ಕೆಯ್ಯೂರು ಪುತ್ತಿಲ ಘಟಕದ  ಸುಮಾರು 20 ಮಂದಿ ಸದಸ್ಯರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here