ದರ್ಬೆ ನಿವಾಸಿ, ಉದ್ಯಮಿ ಗೋಪಾಲಕೃಷ್ಣ ಪೈ ನಿಧನ

0

ಪುತ್ತೂರು:ಇಲ್ಲಿನ ದರ್ಬೆ ನಿವಾಸಿ, ಉದ್ಯಮಿ ಗೋಪಾಲಕೃಷ್ಣ ಪೈ `ಮಹಾಲಸ'(64ವ.)ರವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಜು.19ರಂದು ನಿಧನರಾದರು.


ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯಿರುವ ಶ್ರೀ ಮಹಾಲಸ ಜನರಲ್ ಸ್ಟೋರ್‌ನಲ್ಲಿ ಸಹೋದರ ನಾಗೇಶ್ ಪೈ ಅವರೊಂದಿಗೆ ಸೇರಿ ವ್ಯವಹಾರ ನಿರತರಾಗಿದ್ದ ಇವರು ಅನಾರೋಗ್ಯದ ಕಾರಣಕ್ಕಾಗಿ ಕಳೆದ ಕೆಲವು ಸಮಯದಿಂದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.ಮೃತರು ಪತ್ನಿ ಧನಲಕ್ಷ್ಮೀ ಪೈ, ಪುತ್ರ ಗಣೇಶ್ ಪೈ ಹಾಗೂ ಸಹೋದರರಾದ ವೆಂಕಟೇಶ್ ಪೈ, ನಾಗೇಶ್ ಪೈ ಮತ್ತು ಈರ್ವರು ಸಹೋದರಿಯರನ್ನು ಅಗಲಿದ್ದಾರೆ.ಹಲವು ಗಣ್ಯರು ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here